ಕವನಗಳು

Must Read

ಸಾಯುವದಿಲ್ಲ

ಭಾವನೆಗಳು
ಸಾಯುವದಿಲ್ಲ
ಕಾರಣ ಹೃದಯ
ನೆನಪುಗಳ ಎರಕದಲ್ಲಿ
ಕನಸುಗಳಿಗೆ
ಜೀವ ನೀಡುತ್ತವೆ
ಕಥೆ ಕಾವ್ಯಕವನ
ಶಬ್ದಗಳ ಜಾತ್ರೆ
ಪ್ರೀತಿ ಇದ್ದಲ್ಲಿ
ಹೃದಯ ಸೋಲುತ್ತಲೆ
ಇರುತ್ತದೆ.
ಸೋತ ನೋವಿಲ್ಲ
ಗೆದ್ದವರ ಮೊಗದಲ್ಲಿನ
ಮುಗುಳು ನಗೆಯ
ನಿರೀಕ್ಷೆಯ ಸಂತಸ
ಸಂಭ್ರಮ ನಿತ್ಯವೆನಗೆ

ಹುಡುಕಿ ಕೊಳ್ಳುವ
_________________

ಒಲುಮೆಗಾಗಿ
ನಾವಿಬ್ಬರೂ ಹೀಗೆ
ಸೋಲುತ್ತಲೆ
ಗೆಲುವು ಕಾಣೋಣ

ನೀನು ನಾನು
ಹುಡುಕಿ ಕೊಳ್ಳುವ
ಕಳೆದು ಹೋದ
ಸ್ನೇಹ ಪ್ರೀತಿಯ

ಒಮ್ಮೆ ಸುಖ
ಒಮ್ಮೆ ದುಃಖ
ಸಮರಸ ಭಾವ
ನಮ್ಮ ಜೀವನ

ಸಿಹಿ ಕಹಿ
ಒಗರು ಹುಳಿ
ಬಾನ ನಡುವಿನ
ನಗೆ ಚಂದ್ರಮ

ಕಪ್ಪು ನೆಲದಿ
ಬಯಕೆ ಬೀಜ
ಹೊಸ ಫಸಲಿನ
ಗೊನೆ ತೆನೆ

ಬಾಳ ಬೇಕು
ನೂರು ವರುಷ
ಚೆಲುವು ಗೆಲುವಿನ
ಹೃದಯ ಹರುಷ
_____________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group