spot_img
spot_img

ಕವನ: ಒಂದು ಕನಸಿನ ಕಥೆ

Must Read

spot_img

ಒಂದು ಕನಸಿನ ಕಥೆ

- Advertisement -

ಅಣ್ಣಾ ಕೇಳು, ನಾನೊಂದು ಕನಸ ಕಂಡೆ

ಸರ್ವರಿಗೂ ಉದ್ಯೋಗ, ಅರೋಗ್ಯ, ಸ್ವಂತಮನೆ

ದೃಷ್ಟಿ ಹಾಯಿಸಿದ ಕಡೆಯಲ್ಲೆಲ್ಲ ಶಾಂತಿ, ಸಮೃದ್ಧಿ

- Advertisement -

ಇತ್ತ ನೋಡಿದರತ್ತ ಹಸಿರ ಸಾಮ್ರಾಜ್ಯ

ಎಲ್ಲೆಲ್ಲೂ ಸತ್ಯ, ಶಾಂತಿ, ಅಹಿಂಸೆ ಗಳನ್ನು ರಾಜ್ಯಭಾರ..

ಅಂಗರಕ್ಷಕರೇ ಇಲ್ಲದ, ಹಿಂಬಾಲಕರಿಲ್ಲದ ಸಚಿವರು,

- Advertisement -

ಕಾಲ್ನಡಿಗೆಯಲ್ಲೇ ಸಂಚರಿಸುವ ಜನ ಪ್ರತಿನಿಧಿಗಳು,

ದ್ವಿಚಕ್ರ ವಾಹನದಲ್ಲೇ ಓಡಾಡುವ ಜಿಲ್ಲಾ ಮುಖ್ಯಸ್ಥರು,

ಜಾತಿಯೇ  ಇಲ್ಲದ ನವ ಸಮಾಜ ಕಂಡೆ.. ಸಂತಸದಿ ಕುಣಿದಾಡಿದೆ..

‘ಬಡವರ ಅನ್ನ ದೋಚಿದ್ದ

ನ್ಯಾಯಬೆಲೆ  ಅಂಗಡಿ ಮಾಲೀಕನ ಬಂಧನ ‘

ಟಿವಿ ಸುದ್ದಿ ಕೇಳಿ ಬೆಚ್ಚಿ ಕಣ್ತೆರೆದೆ,

ಅಯ್ಯೋ!! ಚಳಿಗಾಲದ ಕನಸೇ ??

ಕಂಡ ಕನಸು ನನಸಾಗುವುದೇ?

ಆದರ್ಶ ಸಮಾಜ ರೂಪುಗೊಳ್ಳುವುದೇ?

ಯೋಚಿಸುತ್ತಾ ಮತ್ತೆ  ಪವಡಿಸಿದೆ..

  *ಭೇರ್ಯ ರಾಮಕುಮಾರ್, ಮೈಸೂರು

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group