ಕವನ: ಹೆಮ್ಮೆ ಪಡು ಭಾರತೀಯ ಮನವೆ

Must Read

 

ಹೆಮ್ಮೆ ಪಡು ಭಾರತೀಯ ಮನವೆ

ಹೆಮ್ಮೆ ಪಡು ಭಾರತೀಯ ಮನವೆ

ಸ್ವಾಭಿಮಾನದ ಸೌಧ 

ತಲೆಯೆತ್ತಿದೆಯೆಂದು !

ಕರ್ತವ್ಯ ಪಥದಲ್ಲಿಂದು

ಭಾರತ ಮುನ್ನಡೆಯುತ್ತಿದೆಯೆಂದು !

ತಳ್ಳಿ ಬಿಡು 

ಒಣ ಪೂರ್ವಗ್ರಹವ

ಜೋತು ಬಿದ್ದ ಆ ‘ಮನು’ ಮನದ

ಬಿಳಲಿನಿಂದ ಕೆಳಗಿಳಿ

ಹೆಮ್ಮೆ ಪಡು ಇಂದಾದರೂ ಭಾರತ ವಿಶ್ವಗುರುವಾಗಿದೆಯೆಂದು !

ಬಿಟ್ಟು ಬಿಡು ಜಾತ್ಯತೀತತೆಯೆಂಬ 

ನಾಟಕವ

ಕಣ್ದೆರೆ, ಎದೆ ಮುಟ್ಟಿಕೋ

ತಟ್ಟಿ ಕೋ ಸ್ವ- ಹೃದಯವ

ಆತ್ಮ ವಂಚನೆಯನ್ನು ಬಿಸುಟು

ಪ್ರಶ್ನಿಸಿಕೋ ನಿನ್ನ ನೀನು

ನಿಜವಾಗಲೂ ನೀ ಜಾತ್ಯತೀತನೆ….ಎಂದು !

ಈ ಸೌಧವಿದು ಆತ್ಮಾಭಿಮಾನದ ಸೌಧ

ಭಾರತವ ತಲೆಯೆತ್ತಿ ನಿಲ್ಲಿಸಿದ ಸೌಧ

ಪ್ರಾಮಾಣಿಕ, ದೇಶಪ್ರೇಮಿಯೊಬ್ಬನ ಕನಸಿನ ಸೌಧ

ಇನ್ನಾದರೂ ತೊರೆದು ಬಿಡು

ನೆಪದ ನೆಟಿಗೆಗಳ,

 ಹುಸಿ ದೇಶಭಕ್ತಿಯ,

ಮನಬಿಚ್ಚಿ ಆಸ್ವಾದಿಸು,

ಗರ್ವ ಪಡು,

ಎದೆಯುಬ್ಬಿಸಿ ನಿಂತು

ಹೆಮ್ಮೆ ಪಡು ಭಾರತೀಯ ಮನವೇ

ಇದು ನನ್ನ ಸೌಧವೆಂದು !


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಮೂಡಲಗಿಯಲ್ಲಿ ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ

ಮೂಡಲಗಿ:- ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆ ಮೇ,೨೦ ರಂದು ಮಂಗಳವಾರ,ಸಂಜೆ ೪ ಗಂಟೆಗೆ ಮೂಡಲಗಿ ಪಟ್ಟಣದಲ್ಲಿ  ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಿರಂಗಾ ಯಾತ್ರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group