spot_img
spot_img

ಕವನ: ಆತ್ಮ ವಿಮರ್ಶೆ ಆಗಬೇಕಿದೆ

Must Read

- Advertisement -

ಆತ್ಮ ವಿಮರ್ಶೆ ಆಗಬೇಕಿದೆ

ಕವನ ಬರೆಯುವ ಭರದಲ್ಲಿ ಬುರುಡೆಯ ಬರಡನ್ನೂ ಭುವನವನವೆಂದು ಬಿಂಬಿಸುತ್ತೇವೆ ಇದು ನಮಗೆ ಸರಿಯೇ.

ಬೂಟಿನ ಬತ್ತಳಿಕೆಯ ಮಿತಿ ಅರಿಯದೆ ಬೂಟಾಟಿಕೆಯಲ್ಲಿ ವರ್ಣಿಸಿ ಬರೆಯುತ್ತೇವೆ ಇದು ನಮಗೆ ಸರಿಯೇ.

ರೂಪಕಗಳ ಬಣ್ಣಿಸುವ ತರಾತುರಿಯಲ್ಲಿ ಅಂತರಂಗ ಅರಿಯದೆ ಬಾಹ್ಯಾಂಶಕ್ಕೆ ಮಣೆ ಹಾಕುವುದು ಇದು ನಮಗೆ ಸರಿಯೇ.

- Advertisement -

ಹಳ್ಳದ ದಂಡೆಯ ಮೇಲೆ ಕುಳಿತು ನೀರಿನ ಆಳಕ್ಕೆ ಕಲ್ಪನೆಯ ಮೇಳೈಸಿ ಪರಾಮರ್ಶಿಸದೆ ಗೀಚುತ್ತೇವೆ ಇದು ನಮಗೆ ಸರಿಯೇ.

ಶಬ್ಧಗಳನ್ನು ನಿಶ್ಶಸ್ತ್ರ ಮಾಡಿ ರಸಭರಿತ ಲೇಖನದ ಖಡ್ಗವನ್ನು ನಿರುಪಯುಕ್ತನ ಮುಕುಟದಲ್ಲಿಡುತ್ತೇವೆ ಇದು ನಮಗೆ ಸರಿಯೇ.

ಕರ್ಮದ ಫಲವನ್ನು ತಿಳಿಯದೆ ಮರ್ಮದ ತೊಗಲಿನ ಮುಸುಕನ್ನು ಮಸುಕಾದ ಅಕ್ಷರಗಳಿಂದ ಮಸಿಯುತ್ತೇವೆ ಇದು ನಮಗೆ ಸರಿಯೇ.

- Advertisement -

ದುರ್ದಂಧೆ ಚೋರರ ಅಂಧ ಅಭಿಮಾನಿಗಳಾಗಿ ವರ್ಣಮಾಲೆಯ ಹೂಹಾರ ಮೂಡಿಸುತ ನಮ್ಮ ಬರವಣಿಗೆಗೆ ನಾವೇ ಮಸಿಬಳಿದು ಕೊಳ್ಳೋದು ಇದು ನಮಗೆ ಸರಿಯೇ.


ಅನುಪಮ. ಪಿ
ಶಿಕ್ಷಕಿ, ಸಿಂದಗಿ.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group