ಕವನ: ವಿವೇಕನ ನೋಟ

Must Read

ವಿವೇಕನ ನೋಟ

ಭಾರತ ಮಾತೆಯ ಹೆಮ್ಮೆಯ ಸಿಂಹಗಳೇ 

ಏಳಿ ಎದ್ದೇಳಿ ಎಂದು ಕರೆಕೊಟ್ಟು 

ಹೋದ ನನಗೆ ನಿದ್ದೆಯೇ ಇಲ್ಲ 

ಮಲಗಿದವರನ್ನು ಎಚ್ಚರಿಸಬಹುದು 

ಮಲಗಿದಂತೆ ನಾಟಕ ಮಾಡುವವರನ್ನು ನಾ ಹೇಗೆ ಎಚ್ಚರಿಸಲಿ 

ಭರತ ಭೂಮಿಯ ಪುಣ್ಯ ಸಿಂಹಗಳೇ 

ಭಾರತಮಾತೆ ಭರತಭೂಮಿಯ 

ಚರಿತೆ ಮರೆತು ಹೋಯಿತೇ?

ಯುವಕರ ಐಕಾನ್ ಆಗಿದ್ದ ನನ್ನನ್ನು  

ಕೇವಲ ಚಿತ್ರಪಟ ಜನ್ಮದಿನಾಚರಣೆಗೆ ಸೀಮಿತಗೊಳಿಸಿದ್ದೀರಿ 

ಭಾರತ ಬದಲಾಗುವುದನ್ನು ಕಾಣಬೇಕೆಂಬ ಬಯಕೆಯಿಂದ ನನ್ನ ದೂರದೃಷ್ಟಿ ನೆಟ್ಟಿರುವೆ 

ಬದಲಾಯಿಸುವಿರಾ ಭವಿಷ್ಯದ ಭಾರತವ? 

ಸಹೋದರ ಸಹೋದರಿಯರೇ ನಿಮ್ಮೊಡಲಿನಿಂದ ಹೇಳಿ ನನ್ನ 

ಈ  ನೋಟವ ಅರ್ಥ ಮಾಡಿಕೊಳ್ಳಿ 

ನಿಮ್ಮ ಮುಂದಿರುವ ಭವಿಷ್ಯ ಬದಲಾಯಿಸಿಕೊಳ್ಳಿ


ಶಿವಕುಮಾರ ಕೋಡಿಹಾಳ

ಮೂಡಲಗಿ

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group