ವಿವೇಕನ ನೋಟ
ಭಾರತ ಮಾತೆಯ ಹೆಮ್ಮೆಯ ಸಿಂಹಗಳೇ
ಏಳಿ ಎದ್ದೇಳಿ ಎಂದು ಕರೆಕೊಟ್ಟು
ಹೋದ ನನಗೆ ನಿದ್ದೆಯೇ ಇಲ್ಲ
ಮಲಗಿದವರನ್ನು ಎಚ್ಚರಿಸಬಹುದು
ಮಲಗಿದಂತೆ ನಾಟಕ ಮಾಡುವವರನ್ನು ನಾ ಹೇಗೆ ಎಚ್ಚರಿಸಲಿ
ಭರತ ಭೂಮಿಯ ಪುಣ್ಯ ಸಿಂಹಗಳೇ
ಭಾರತಮಾತೆ ಭರತಭೂಮಿಯ
ಚರಿತೆ ಮರೆತು ಹೋಯಿತೇ?
ಯುವಕರ ಐಕಾನ್ ಆಗಿದ್ದ ನನ್ನನ್ನು
ಕೇವಲ ಚಿತ್ರಪಟ ಜನ್ಮದಿನಾಚರಣೆಗೆ ಸೀಮಿತಗೊಳಿಸಿದ್ದೀರಿ
ಭಾರತ ಬದಲಾಗುವುದನ್ನು ಕಾಣಬೇಕೆಂಬ ಬಯಕೆಯಿಂದ ನನ್ನ ದೂರದೃಷ್ಟಿ ನೆಟ್ಟಿರುವೆ
ಬದಲಾಯಿಸುವಿರಾ ಭವಿಷ್ಯದ ಭಾರತವ?
ಸಹೋದರ ಸಹೋದರಿಯರೇ ನಿಮ್ಮೊಡಲಿನಿಂದ ಹೇಳಿ ನನ್ನ
ಈ ನೋಟವ ಅರ್ಥ ಮಾಡಿಕೊಳ್ಳಿ
ನಿಮ್ಮ ಮುಂದಿರುವ ಭವಿಷ್ಯ ಬದಲಾಯಿಸಿಕೊಳ್ಳಿ
ಶಿವಕುಮಾರ ಕೋಡಿಹಾಳ
ಮೂಡಲಗಿ