ಬೆಳಗಾವಿ – ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.27 ರಂದು ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.
ಪ್ರಾರಂಭದಲ್ಲಿ ಶರಣೆ ಸುವಣ೯ ತಿಗಡಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು, ಬಸವರಾಜ ಗುರನಗೌಡ್ರ, ಆನಂದ ಕಕಿ೯, ಮುಂತಾದವರು ವಚನ ವಿಶ್ಲೇಷಣೆ ಮಾಡಿದರು.
ಅಕ್ಕಮಹಾದೇವಿ ತೆಗ್ಗಿ ಕಾಯಕದ ಮಹತ್ವ ಕುರಿತು ಮಾತನಾಡಿದರು. ಎಣ್ಣೆ ತೆಗೆಯುವವರು ಗಾಣಿಗ,ಬಟ್ಟೆ ಹೊಲಿಯುವವರು ಸಿಂಪಿಗ, ಬುಟ್ಟಿ ಮಾಡುವವರು ಮೇದಾರ, ಗಡಿಗೆ ಮಾಡುವವರು ಕುಂಬಾರ,ರೈತರ ವಸ್ತು ಮಾಡುವವರು ಕಂಬಾರ ಎಂಬ ಉದ್ಯೋಗಗಳ ಬಗ್ಗೆ ಮಾತನಾಡುತ್ತ ಬಸವ ಜಯಂತಿ ಮಹತ್ವ ತಿಳಿಸಿದರು. ದಿ. 4.5.2025 ರಂದು ನಾವೆಲ್ಲ ಸೇರಿ ಬಸವ ಜಯಂತಿ ಆಚರೀಸೋಣ ಎಂದರು
ಗುರುಸಿದ್ದಪ್ಪ ರೇವಣ್ಣವರ, ತಿಗಡಿ ದಂಪತಿಗಳು,ಚ೦ಪಾವತಿ ತ೦ಗಡೆ, ಅನ್ನಪೂರ್ಣ ಕಾಡಣ್ಣವರ,ಶಾಂತಾ ತಿಗಡಿ, ನ೦ದಾ ಬಗಲಿ,ಕೆ೦ಪಿ ಗೌಡರ ದ೦ಪತಿಗಳು,ಗಂಗಪ್ಪ ಉಣಕಲ,ಉಪಸ್ಥಿತರಿದ್ದರು ಆನಂದ ಕಕಿ೯ ನಿರೂಪಿಸಿ ವಂದಿಸಿದರು.