ರಾಷ್ಟ್ರೀಯ ಕನಕಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ

0
415

ಸಿಂದಗಿ; ಗೋಲಗೇರಿಯ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿಗೆ ಬೆಳಗಾವಿ ಜಿಲ್ಲೆಯ ಬ್ಯಾಕೂಡದ ಕನಕಶ್ರೀ ಪ್ರಕಾಶನದಿಂದ ಧಾರವಾಡದ ರಂಗಾಯಣದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕನಕಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಮ್ಮಿಗಟಿಯ ಪೂಜ್ಯ ಶ್ರೀ ದಯಾನಂದ ಸ್ವಾಮೀಜಿ, ಬೆಳ್ಳೇರಿಯ ಪೂಜ್ಯಶ್ರೀ ಡಾ. ಬಸವಾನಂದ ಸ್ವಾಮೀಜಿ, ಸಾಹಿತಿ ಅರುಣಕುಮಾರ ರಾಜಮಾನೆ, ಡಾ.ಸುರೇಶ ಕಮ್ಮಾರ, ಪತ್ರಕರ್ತ ಡಾ.ಎಸ್.ಎಸ್.ಪಾಟೀಲ, ಸಿದ್ರಾಮ ನಿಲಜಗಿ ಸೇರಿದಂತೆ ಇನ್ನಿತರ ಸಾಹಿತಿ ಕಲಾವಿದರು ಉಪಸ್ಥಿತರಿದ್ದರು.