ಬೀದರ – ಗಡಿ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಳಿ ಮಂಗಳವಾರ ಬಕ್ರೀದ್ ಹಬ್ಬದ ಪ್ರಯುಕ್ತ ಸಾಗಿಸಲಾಗುತ್ತಿದೆ ಎನ್ನಲಾದ 15 ಜಾನುವಾರುಗಳನ್ನು ಒಳಗೊಂಡ ಟೆಂಪೋವನ್ನು ಭಾಲ್ಕಿಯ ಗ್ರಾಮೀಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎತ್ತು,ಹೋರಿ ಸೇರಿದಂತೆ 15 ವಶಕ್ಕೆ ಪಡೆದು ದನಗಳನ್ನು ಕರಡ್ಯಾಳದ ಗೋಶಾಲೆಗೆ ಕಳುಹಿಸಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಿಎಸ್ಐ, ಮಹೇಂದ್ರ ಕುಮಾರ ಪಶು ಚಿಕಿತ್ಸಾಲಯದ ವೈದ್ಯ ಡಾ. ರಾವಸಾಬ್ ಪಾಟೀಲ್, ಪಶು ಪರಿವೀಕ್ಷಕ ಸತೀಶ್ ಭೋಸಲೆ ಉಪಸ್ಥಿತರಿದ್ದರು.