ಯಾವುದೇ ಅಹಂಕಾರವಿಲ್ಲದೆ ರಾಜ್ಯವನ್ನೇ ಗೆದ್ದ ರಾಜಕುಮಾರ – ಜ್ಯೂ. ಎನ್ ಟಿಆರ್
ಬೆಂಗಳೂರು – ಅಪ್ಪು ಒಬ್ಬ ಗ್ರೇಟ್ ಹ್ಯೂಮನ್ ಬೀಯಿಂಗ್ ಅವರ ನಗುವಿನಲ್ಲಿ ಇದ್ದ ಶ್ರೀಮಂತಿಕೆ ಎಲ್ಲೂ ಇಲ್ಲ. ಅಹಂಕಾರವೇ ಇಲ್ಲದೆ ರಾಜ್ಯವನ್ನೇ ಗೆದ್ದ ರಾಜಕುಮಾರ ಪುನೀತ ರಾಜಕುಮಾರ ಎಂದು ಜ್ಯೂ. ಎನ್ ಟಿಆರ್ ಹೇಳಿದರು.
ಒಂದು ವರ್ಷದ ಹಿಂದೆ ಅಗಲಿದ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊದಲಿಗೆ ಕನ್ನಡಿಗರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದು ಮಾತು ಆರಂಭಿಸಿದ ಅವರು, ಅಪ್ಪು ಅವರ ನಗುವಿನಲ್ಲಿ ಇದ್ದ ಶ್ರೀಮಂತಿಕೆ ಮತ್ತೆಲ್ಲೂ ಇಲ್ಲ ಎಂದರು.
ಹಿರಿಯ ನಟ ರಜನಿಕಾಂತ್ ಮಾತನಾಡಿ, ಅಪ್ಪು ಎಲ್ಲರ ಮನೆ ಮನದಲ್ಲೂ ರಾರಾಜಿಸುತ್ತಿರುತ್ತಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಪ್ಪು ನಮ್ಮನ್ನು ಅಗಲಿಲ್ಲ. ಇಲ್ಲೇ ಇದ್ದಾರೆ. ಕರ್ನಾಟಕದ ಮನೆ ಮನೆಯಲ್ಲೂ, ಹಳ್ಳಿ ಹಳ್ಳಿಯಲ್ಲೂ ಇದ್ದಾರೆ. ಅಪ್ಪು ಅಜರಾಮರ ಎಂದರು.
ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸುಧಾ ಮೂರ್ತಿ ಅವರು ಸತ್ಕರಿಸಿ ಗೌರವಿಸಿದರು. ಮುಖ್ಯಮಂತ್ರಿ ಬೊಮ್ಮಾಯಿಯವರು ಪ್ರಶಸ್ತಿ ಪ್ರದಾನ ಮಾಡಿದರು.