- Advertisement -
ಸಿಂದಗಿ: ಧಾರ್ಮಿಕ ಆಚರಣೆಗಳು ಸಾಮಾಜಿಕ ಸಾಮರಸ್ಯಕ್ಕೆ ದಾರಿಯಾಗಿವೆ ಎಂದು ಪುರಾಣಿಕರಾದ ಶಿವಲಿಂಗಯ್ಯ ಶಾಸ್ತ್ರಿಗಳು ಗರೂರ(ಬಿ) ಹೇಳಿದರು.
ತಾಲೂಕಿನ ದೇವಣಗಾಂವ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವಿ ಪುರಾಣ ಕಾರ್ಯಕ್ರಮ ಪ್ರಾರಂಭಿಸಿ ಅವರು ಮಾತನಾಡುತ್ತಿದ್ದರು.
- Advertisement -
ಸುಜ್ಞಾನ ಮತ್ತು ಅಜ್ಞಾನಗಳ ನಡುವೆ ನಡೆಯುವ ಯುದ್ದವೇ ದೇವಿ ಪುರಾಣದಲ್ಲಿನ ಪ್ರಮುಖ ಅಂಶ ಇದರಲ್ಲಿನ ದುಷ್ಟಗುಣಗಳನ್ನು ಅಳಿಸಿ ಶಿಷ್ಟ ಗುಣಗಳನ್ನು ಅಳವಡಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಿ ಎಂದರು.
ಗವಾಯಿಗಳಾದ ಶಿವರುದ್ರಯ್ಯ ಗೌಡಗಾಂವ, ತಬಲಾವಾದಕ ಶಾಂತಕುಮಾರ ಜೇರಟಗಿ, ಶಿವಯ್ಯ ಹಿರೇಮಠ, ಶಿವಲಿಂಗ ಬಗಲಿ, ಅಣವೀರ ಸುತಾರ, ಚನ್ನಪ್ಪ ಗಂಗನಳ್ಳಿ, ಲಕ್ಷ್ಮಿಪುತ್ರ ಬಗಲಿ ಹಾಗೂ ಗ್ರಾಮಸ್ಥರು ಇದ್ದರು.