“ಕುಣಿಗಲ್ ಕುದುರೆ”

Must Read

ಮೈ ಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ, ದೈಹಿಕ ಚಟುವಟಿಕೆಗಳಲ್ಲಿ ಚುರುಕುತನ ತೋರುವ ವ್ಯಕ್ತಿಗಳಿಗೆ ‘ಕುಣಿಗಲ್ ಕುದುರೆ’ ಉಪಮೆ ಬಳಸಲಾಗುತ್ತದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸ್ಟಡ್ ಫಾರಂ (ಕುದುರೆ ಸಂತಾನೋತ್ಪತ್ತಿ ಕೇಂದ್ರ) ಇದ್ದು  ಇಲ್ಲಿನ ಕುದುರೆಗಳು ವಿಶ್ವವಿಖ್ಯಾತ. ದೇಶದ ಅಗ್ರ ಸ್ಟಡ್ ಫಾರಂಗಳಲ್ಲಿ ಕುಣಿಗಲ್ ಕುದುರೆ ಫಾರಂ ಕೂಡ ಒಂದು.

ಇಲ್ಲಿನ ಕುದುರೆಗಳು 18 ನೇ ಶತಮಾನಕ್ಕೂ ಹಿಂದಿನ ‘ಥ್ರೋಬ್ರೆಡ್‌’ ತಳಿಯವು. 1790 ರ ದಶಕದಲ್ಲಿ ಟಿಪ್ಪು ಸುಲ್ತಾನ್ ತನ್ನ ಯುದ್ಧಗಳಿಗಾಗಿ ಕುದುರೆಗಳನ್ನು ಸಾಕಲು ಈ ಫಾರ್ಮ್ ಅನ್ನು ರಚಿಸಿದನು. ಅವನ ಮರಣದ ನಂತರ ಈ ಫಾರ್ಮ್ ಅನ್ನು ಬ್ರಿಟಿಷ್ ಸೈನ್ಯವು ಅಶ್ವದಳದ ರೆಜಿಮೆಂಟ್‌ಗಳಿಗಾಗಿ ಮುಖ್ಯವಾಗಿ ಅರೇಬಿಯನ್ ಕುದುರೆಗಳನ್ನು ಸಾಕಲು ಬಳಸಿತು. 1948 ರಲ್ಲಿ ಮೈಸೂರು ಸಾಮ್ರಾಜ್ಯ ಸರ್ಕಾರಕ್ಕೆ ವರ್ಗಾವಣೆಗೊಳ್ಳುವ ಮೊದಲು ಮೈಸೂರು ರಾಜ್ಯ ಇದನ್ನು ಮಿಲಿಟರಿ ಇಲಾಖೆಗೆ ವರ್ಗಾಯಿಸಲಾಗಿತ್ತು. 1992 ರಲ್ಲಿ ಕರ್ನಾಟಕ ಸರ್ಕಾರವು ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರ ರೇಸ್ ಹಾರ್ಸ್ ಡಿವಿಷನ್ ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ ಸ್ಟಾಕ್ ಬ್ರೀಡರ್ಸ್ (URBB) ಗೆ ಈ ಫಾರ್ಮ್ ಅನ್ನು ಗುತ್ತಿಗೆಗೆ ನೀಡಿತು.  ರೇಸಿಂಗ್ ಕುದುರೆಗಳು ಇಲ್ಲಿನ ವಿಶೇಷ. 

ಕುದುರೆಗಳು ಗಂಟೆಗೆ ಸರಾಸರಿ 60 ಕಿ.ಮೀ. ವೇಗದಲ್ಲಿ ಓಡುತ್ತವೆ. ಹುಟ್ಟಿದಾಗ 50 ಕೆ.ಜಿ ತೂಗುವ ಕುದುರೆಗಳು ರೇಸ್‌ನಲ್ಲಿ ಭಾಗವಹಿಸುವ ವೇಳೆಗೆ 500 ಕೆ.ಜಿ ತೂಗುತ್ತವೆ.  ಅಗತ್ಯ ತರಬೇತಿ ನೀಡಲು ರೇಲ್ಡೀಫೀಲ್ಡ್ ಮತ್ತು ವಾಕರ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ – ಸಂಜೆ ವಾಕರ್, ರೇಡ್ ಫೀಲ್ಡ್‌ನಲ್ಲಿ 2 ವರ್ಷದೊಳಗಿನ ಕುದುರೆಗಳಿಗೆ ಓಡುವ ಸ್ಪೀಡ್ ಕಲಿಸಿ, 2 ವರ್ಷದ ನಂತರ ನಾನಾ ಕಡೆ ರೇಸ್‌ಗೆ ಕಳಿಸಲಾಗುತ್ತೆ. 

ಕುದುರೆ ಮಾತ್ರವಲ್ಲದೆ ನಾನಾ ರೀತಿಯ ಪಕ್ಷಿಗಳೂ ಫಾರಂನಲ್ಲಿ ಆಶ್ರಯ ಪಡೆಯುತ್ತಿವೆ. ಈ ಫಾರಂನ ಒಟ್ಟು ವಿಸ್ತೀರ್ಣ 443 ಎಕರೆ.  ಅಮೆರಿಕಾದ ರೇಸ್‌ನಲ್ಲಿ ಗೆದ್ದ ಮೊದಲ ಭಾರತೀಯ ಕುದುರೆ ಆಡ್ಲರ್ ಕೂಡ ಇಲ್ಲಿಯದೇ. ಇದು ಈವರೆಗೆ ಭಾಗವಹಿಸಿರುವ 9 ರೇಸ್‌ಗಳಲ್ಲೂ ಚಾಂಪಿಯನ್ ಆಗಿ ವಿಶ್ವದ ಗಮನ ಸೆಳೆದಿದೆ.


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕವನ : ಮಳೆರಾಯ

ಮಳೆರಾಯ ಇಳೆಯನರಸಿ ಬಾರೋ ಧರೆಯ ಧಗೆಯ ತಣಿಸಿ ವರ್ಷಧಾರೆ ಎರೆದು ತಂಪನೆರೆದು ಸಂತೈಸಿ.ಚಿಗುರಿ ಬೆಳೆದು ನಗೆಯ ತುಂಬಿ ಬವಣೆ ನೀಗಿ ಚೈತನ್ಯ ತುಂಬಿ.ಬಂಜೆ ಭೂಮಿ ಕಳೆದು ಮಂದಹಾಸ ಬೀರಿ ಸಂಕುಲವ ಪೊರೆದು ವ್ಯಾಕುಲತೆ ಮೀರಿ.ಹಸಿರ ರಾಶಿ ಹೊತ್ತು ಹಸಿವ ತೀರಿಸಿ ಬಲವ ಪೂರೈಸಿ ಛಲದ...
- Advertisement -

More Articles Like This

- Advertisement -
close
error: Content is protected !!
Join WhatsApp Group