spot_img
spot_img

ಮಿನಿ ವಿಧಾನ ಸೌಧ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ರಹೀಮ್ ಖಾನ

Must Read

spot_img
- Advertisement -

ಬೀದರ : ಜಿಲ್ಲಾ ಸಂಕೀರ್ಣ (ಮಿನಿ ವಿಧಾನ ಸೌಧ) ನಿರ್ಮಾಣ ವಿಳಂಬ ಮತ್ತು ಶಿಫ್ಟಿಂಗ್ ಯೋಜನೆಗೆ ತಮ್ಮ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ರಹಿಮ್ ಖಾನ್.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಶಾಸಕ ರಹಿಂ ಖಾನ್ ಅವರು ಮಾತನಾಡಿ, ದೂರದ ಸ್ಥಳದಲ್ಲಿ ಡಿಸಿ ಆಫೀಸ್ ನಿರ್ಮಿಸುವ ಯೋಜನೆಯನ್ನು ಟೀಕಿಸಿದರು ಮತ್ತು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಅದು ಮುಖ್ಯ ನಗರದಿಂದ 10 ಕಿಮೀ ದೂರವಿರುವುದು ಮತ್ತು ಬಡವರು, ರೈತರು, ಮಹಿಳೆಯರು ಮತ್ತು ಎಲ್ಲರಿಗೂ ದೂರದ ಕೆಲಸ ಮಾಡಲು ಭಾರೀ ವೆಚ್ಚ ತಗಲುತ್ತದೆ ಮತ್ತು ಇದು ಲ್ಯಾಂಡ್ ಮಾಫಿಯಾಕ್ಕೆ ಮಾತ್ರ ಲಾಭದಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಈಗಿರುವ ಡಿಸಿ ಕಚೇರಿಯಲ್ಲಿ ಇದನ್ನು ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಸ್ಥಳ, ಶಾಸಕ, ಮಂತ್ರಿಗಳ ಕಟ್ಟಡವನ್ನು ಒಂದೇ ಸ್ಥಳದಲ್ಲಿ ನಿರ್ಮಿಸಲು ಎಲ್ಲರ ಒಮ್ಮತವಿದೆ ಎಂದು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ 50 ಕೋಟಿ ರೂ. ಮಂಜೂರು ಮಾಡಿದ್ದು ಸರ್ಕಾರವು ಹೆಚ್ಚುವರಿ ನಿಧಿಯನ್ನು ಮಂಜೂರು ಮಾಡಬೇಕು. ಅದು ಸಾರ್ವಜನಿಕ ಅಭಿಪ್ರಾಯವಾಗಿದೆ ಎಂದು ಶಾಸಕ ರಹೀಮ ಖಾನ್ ಹೇಳಿದರು.

ನಾನು ಯಾವಾಗಲೂ ಸಾರ್ವಜನಿಕ ಧ್ವನಿಗಾಗಿ ಹೋರಾಡುತ್ತೇನೆ. ಎಂದು ಗುಡುಗಿದ ರಹಿಂ ಖಾನ ಸಚಿವ ಪ್ರಭು ಚೌವ್ಹಾಣ ಭಾಲ್ಕಿ ಶಾಸಕ ಶ್ರೀ ಈಶ್ವರ್ ಬಿ ಖಂಡ್ರೆ, ಹುಮ್ನಾಬಾದ ಶಾಸಕ ರಾಜಶೇಖರ್ ಬಿ ಪಾಟೀಲ್ , ಬೀದರ್ (ಎಸ್) ಶಾಸಕ ಬಂಡೆಪ್ಪ ಖಾಶೆಂಪುರೆ ಎಂಎಲ್ಸಿ ರಘುನಾಥ ಮಲ್ಕಾಪುರೆ ಅರವಿಂದ ಅರಳಿ ಡಿಸಿ, ಎಸ್ಪಿ, ಎಡಿಸಿ, ಡಿಹೆಚ್ಒ, ಈ ಸಂದರ್ಭದಲ್ಲಿ ಬೀದರ್‌ನ ಡಿಸಿ ಕಚೇರಿಯಲ್ಲಿ ನಿರ್ದೇಶಕ ಬ್ರಿಮ್ಸ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group