spot_img
spot_img

ರಾಯಚೂರು; ಶಿಥಿಲ ಸೇತುವೆಯ ಮೇಲೆ ಭಾರೀ ವಾಹನಗಳ ಜಾತ್ರೆ

Must Read

spot_img
- Advertisement -

ರಾಯಚೂರು: ರಾಯಚೂರಿನಿಂದ ಮೆಹಬೂಬ ನಗರಕ್ಕೆ ಹೋಗುವ ಹೆದ್ದಾರಿಯಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿರುವ ಕೃಷ್ಣಾ ಸೇತುವೆ ಶಿಥಿಲಗೊಂಡಿದ್ದರೂ ಇಲ್ಲಿ ಅಸಂಖ್ಯ ಪ್ರಮಾಣದಲ್ಲಿ ಭಾರೀ ವಾಹನಗಳ ಸಂಚಾರ ನಡೆದೇ ಇದೆ.

ಶುಕ್ರವಾರ ಈ ಕೃಷ್ಣಾ ಸೇತುವೆಯ ಮೇಲೆ ಭಾರೀ ವಾಹನಗಳ ದಟ್ಟಣೆ ಕಂಡುಬಂದು ಟ್ರಕ್ ಚಾಲಕರ ಮಧ್ಯೆ ಜಗಳಕ್ಕೂ ಕಾರಣವಾಯಿತು. ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದಾದ ಈ ಸೇತುವೆಯ ಮೇಲೆ ಭಾರೀ ವಾಹನಗಳಿಗೆ ಪರವಾನಿಗೆ ಇಲ್ಲ ಎಂಬ ಬೋರ್ಡ್ ಹಾಕಿದ್ದರೂ ಅದಕ್ಕೆ ಬೆಲೆ ಇಲ್ಲದಂತಾಗಿದೆ. ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ ಇಲ್ಲವಾದರೆ ಇದೇ ಸೇತುವೆಯ ಮೇಲೆ ವಿರಳವಾಗಿ ಚಲಿಸುವಂತೆ ಸಂಚಾರಿ ಇಲಾಖೆ ಕ್ತಮ ಕೈಗೊಳ್ಳಬೇಕಾಗಿದೆ.

- Advertisement -

ಕೃಷ್ಣಾ ಸೇತುವೆ ಇಕ್ಕಟ್ಟಾಗಿದ್ದು ದೊಡ್ಡ ದೊಡ್ಡ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತದೆ. ಆದರೂ ಸೇತುವೆಯ ಮೇಲೆ ಸುಗಮ ಸಂಚಾರಕ್ಕೆ ಇಲ್ಲಿನ ಜನಪ್ರತಿನಿಧಿಗಳು ಮನಸು ಮಾಡಿದಂತಿಲ್ಲ. ಕೃಷ್ಣಾ ಸೇತುವೆಯ ಪಕ್ಕದಲ್ಲಿಯೇ ಇನ್ನೊಂದು ಸೇತುವೆಯ ಕೆಲಸ ಬಹಳ ದಿನಗಳಿಂದ ಸ್ಥಗಿತಗೊಂಡಿದೆ. ಅರ್ಧ ಕಾಮಗಾರಿಯಾಗಿರುವ ಈ ಕಟ್ಟಡದ ಸುತ್ತೆಲ್ಲ ಗಿಡಗಂಟಿಗಳು ಬೆಳೆದು ನಿಂತು ಅವ್ಯವಸ್ಥೆಯನ್ನು ಸಾರುತ್ತಿದೆ.

ಸಂಬಂಧಿಸಿದ ಇಲಾಖೆ ಆದಷ್ಟು ಬೇಗ ಸೇತುವೆ ದುರಸ್ತಿ ಹಾಗೂ ಪಕ್ಕದ ಹೊಸ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂಬುದು ಇಲ್ಲಿ ಪ್ರಯಾಣಿಸುವ ಅಸಂಖ್ಯ ಪ್ರಯಾಣಿಕರ ಆಶಯವಾಗಿದೆ.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group