spot_img
spot_img

ರೈಲ್ವೇ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ – ಈರಣ್ಣ ಕಡಾಡಿ

Must Read

- Advertisement -

ಬೆಳಗಾವಿ: ಬೆಳಗಾವಿ ರೇಲ್ವೆ ನಿಲ್ದಾಣದ ಆಧುನಿಕರಣ ಕಾಮಗಾರಿಗಳನ್ನು (ಸ್ಟೇಶನ ಬಿಲ್ಡಿಂಗ್, ಪ್ಲಾಟಫಾರ್ಮ್, ಫ್ಲಿಟಲೈನ್ ಮತ್ತು ಮುಖ್ಯದ್ವಾರದ ಜೊತೆಗೆ ಪರ‍್ಯಾಯ ಪ್ರವೇಶದ್ವಾರ) ೨೦೨೨ ಮಾರ್ಚ ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದೆಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ ಭರವಸೆ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.

ಸಪ್ಟಂಬರ-೩೦ ಗುರುವಾರದಂದು ಹುಬ್ಬಳ್ಳಿಯ ನೈರುತ್ಯ ರೇಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಸಂಸದ ಈರಣ್ಣ ಕಡಾಡಿ ಯವರು ರೇಲ್ವೆ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದರು.

ಹುಬ್ಬಳ್ಳಿ-ಮೀರಜ ನಡುವೆ ನಡೆಯುತ್ತಿರುವ ‘ಡಬಲ್ ಟ್ರ್ಯಾಕ್’ ಕಾಮಗಾರಿ ಇನ್ನೂ ಸಾಕಷ್ಟು ತ್ವರಿತಗತಿಯಲ್ಲಿ ಸಾಗಬೇಕಾಗಿದ್ದು, ಶೀಘ್ರ ಅನುಷ್ಠಾನಕ್ಕಾಗಿ ಒತ್ತಾಯಿಸಿದರು.

- Advertisement -

ದಿವಂಗತ ಶ್ರೀ ಸುರೇಶ ಅಂಗಡಿಯವರ ಕನಸಾಗಿದ್ದ ಧಾರವಾಡ-ಬೆಳಗಾವಿ (ವಾಯಾ-ಕಿತ್ತೂರ) ರೈಲು ಮಾರ್ಗದ ಕಾರ್ಯಗಳ ಅಡೆತಡೆಗಳನ್ನು ಆದಷ್ಟು ಬೇಗನೆ ನಿವಾರಿಸಲು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ, ಉಪಪ್ರಧಾನ ವ್ಯವಸ್ಥ್ಥಾಪಕರಾದ ಆಶೀಶ್ ಪಾಂಡ್ಯೆ, ರೈಲ್ವೇ ವಿಭಾಗದ ಮುಖ್ಯ ಅಭಿಯಂತರರಾದ ವಿಷ್ಣು ಭೂಷಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group