- Advertisement -
‘ರಕ್ಷಾ ಬಂಧನವು ಸೋದರತೆಯನ್ನು ಗಟ್ಟಿಗೊಳಿಸುವುದು’
ಮೂಡಲಗಿ: ‘ರಕ್ಷಾ ಬಂಧನವು ಸೋದರತೆ, ಸೌಹಾರ್ದತೆಯನ್ನು ಬಲಪಡಿಸುವುದರೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವುದು’ ಎಂದು ಮೂಡಲಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರೇಖಾ ಅಕ್ಕಾಜೀ ಅವರು ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತೀಯ ಹಬ್ಬಗಳು, ಆಚರಣೆಗಳಿಂದ ದೇಶದ ಸಂಸ್ಕೃತಿಯು ಶ್ರೀಮಂತವಾಗಿದೆ ಎಂದರು.
- Advertisement -
ಪರಮಾತ್ಮನನ್ನು ನಿತ್ಯ ಧ್ಯಾನಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಳ್ಳಬೇಕು ಎಂದರು.
ಭಾಗವಹಿಸಿದ್ದ ಎಲ್ಲ ಭಕ್ತರಿಗೆ ರಕ್ಷಾ ಬಂಧನ ಮಾಡಿದರು.
ಸವಿತಾ ಅಕ್ಕಾಜೀ, ಶಿವಪುತ್ರಯ್ಯ ಮಠಪತಿ, ವೈ.ಬಿ. ಕುಲಿಗೋಡ, ಶಿವಾನಂದ ಮುಗಳಖೋಡ, ಜಿ.ಕೆ. ಮುರಗೋಡ, ಬಾಲಶೇಖರ ಬಂದಿ, ಮಲ್ಲಿಕಾರ್ಜುನ ಎಮ್ಮಿ, ಈರಪ್ಪ ಹಂದಿಗುಂದ, ಶಂಕರ ಮುಗಳಖೋಡ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.