- Advertisement -
ಸಿಂದಗಿ: ವಿಜಯಪೂರ-ಬಾಗಲಕೋಟೆ ವಿಧಾನ ಪರಿಷತ್ತು ಚುನಾವಣೆಯ ಹಿನ್ನೆಲೆಯಲ್ಲಿ ಮತಯಾಚನೆ ಸಮಾರಂಭವನ್ನು ಸಿಂದಗಿ ಮತಕ್ಷೇತ್ರದ ಶಾಸಕರಾದ ರಮೇಶ ಭೂಸನೂರ ಅವರು ತಾಲೂಕಿನ ದೇವಣಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ವ-ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಪಿ.ಎಚ್.ಪೂಜಾರ ಅವರ ಪರವಾಗಿ ಮತವನ್ನು ಚಲಾಯಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು,ಸಿಂದಗಿ ಮಂಡಲದ ಅಧ್ಯಕ್ಷರಾದ ಈರಣ್ಣಾ ರಾವೂರ,ಕಾಶಿನಾಥಗೌಡ ಗಂಗನಳ್ಳಿ, ಶ್ರೀಮಂತಗೌಡ ನಾಗೂರ,ಶರಣಪ್ಪ ಕಣ್ಮೇಶ್ವರ,ಶಂಕರಲಿಂಗ ಕಡ್ಲೇವಾಡ,ಸಿದ್ದು ಹೀರಾಪೂರ,ಬಸವರಾಜ ತಾವರಖೇಡ ಮುಂತಾದವರು ಉಪಸ್ಥಿತರಿದ್ದರು.