ಸಿಂದಗಿ: ಮಾಜಿ ಕೇಂದ್ರ ಸಚಿವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯನ್ನು ಹೈ ಕಮಾಂಡ್ ಮರು ಪರಿಶೀಲನೆ ಮಾಡಿ, ರದ್ದು ಮಾಡಬೇಕೆಂದು ಜ್ಞಾನ ಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ ಸತೀಶ ಹಿರೇಮಠ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಉತ್ತರ ಕರ್ನಾಟಕದ ಅಭಿವೃದ್ದಿಯ ಚಿಂತಕ, ಶಿಕ್ಷಣ ಪ್ರೇಮಿ, ಭ್ರಷ್ಟಾಚಾರ ಮತ್ತು ವಂಶವಾರು ರಾಜಕಾರಣವನ್ನು ವಿರೋಧಿಸಿ ಸರ್ವ ಸಮಾಜದ ಹಿತ ಬಯಸಿದ ಹಿರಿಯ ರಾಜಕಾರಣಿ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾದ ಯತ್ನಾಳರ ಉಚ್ಚಾಟನೆ ಖಂಡನೀಯ ಪಕ್ಷದ ವರಿಷ್ಠರು ಕೂಡಲೇ ಈ ಉಚ್ಚಾಟನೆಯನ್ನು ಪರಿಶೀಲಿಸಿ ರದ್ದುಗೊಳಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.