ದಿ.೨೨ ರಂದು ಕೃತಿ ಬಿಡುಗಡೆ ಸಮಾರಂಭ

Must Read

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ರಂಗಸಂಪದ ಬೆಳಗಾವಿ, ಚಂದ್ರಕಾಂತ್ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ಇವರ ಸಹಯೋಗದಲ್ಲಿ ಹಿರಿಯ ರಂಗ ಕಮಿ೯ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ ಎಂಟನೆಯ ಮುದ್ರಣದ ಬಿಡುಗಡೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಡಾ. ಸರಜೂ ಕಾಟ್ಕರ ಇವರು ಬಿಡುಗಡೆ ಮಾಡುವರು.

ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಾ ಸೋನೊಳ್ಳಿ,ಅರವಿಂದ ಕುಲಕಣಿ೯, ಅಧ್ಯಕ್ಷರು ರಂಗ ಸಂಪದ, ಆಶಾ ಕಡಪಟ್ಟಿ ಹಿರಿಯ ಲೇಖಕಿ ಇವರು ಆಗಮಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷಕತೆಯನ್ನು ಹಿರಿಯ ಸಾಹಿತಿ ಬಿ ಎಸ್ ಗವಿಮಠ ವಹಿಸಲಿದ್ದಾರೆ ಕೃತಿ ಬಿಡುಗಡೆ ಸಮಾರಂಭ ದಿನಾಂಕ 22.05.2022 ಸಂಜೆ 4.00ಘಂಟೆಗೆ ಕನ್ನಡ ಸಾಹಿತ್ಯ ಭವನ ಚನ್ನಮ್ಮವೃತ್ತ ಬೆಳಗಾವಿ ಇಲ್ಲಿ ನಡೆಯಲಿದೆ. ಆಸಕ್ತರು ಆಗಮಿಸಲು ಏಣಗಿ ಸುಭಾಷ್ ವಿನಂತಿಸಿದ್ದಾರೆ.

Latest News

ಕುಳಲಿಯಲ್ಲಿ ರಾಜ್ಯಮಟ್ಟದ ಸಂಗೀತೋತ್ಸವ

ಸಾಧಕ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮುಧೋಳ - ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಾಜ್ಯಮಟ್ಟದ...

More Articles Like This

error: Content is protected !!
Join WhatsApp Group