spot_img
spot_img

ಶಿಕ್ಷಕರ ಕುಂದು ಕೊರತೆಗೆ ಗುರುಸ್ಪಂದನದಿಂದ ಪರಿಹಾರ – ಎಚ್.ಆರ್.ಪೆಟ್ಲೂರ

Must Read

- Advertisement -

ಸವದತ್ತಿ -“ಶಿಕ್ಷಕರಿಗೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ದೊರಕಿಸುವಲ್ಲಿ ಎಲ್ಲರ ಸಹಕಾರ ಮುಖ್ಯ. ಗುರುಸ್ಪಂದನವನ್ನು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಮ್ಮಿಕೊಂಡು ಶಿಕ್ಷಕರ ಕುಂದು ಕೊರತೆಗಳನ್ನು ಬಗೆ ಹರಿಸಲು ಶ್ರಮಿಸಲಾಗುವುದು” ಎಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ ಹೇಳಿದರು.

ಗ್ರಾಮದ ಕಸ್ತೂರ ಬಾ ವಸತಿ ಶಾಲೆಯಲ್ಲಿ ಬುಧವಾರ ಜರುಗಿದ “ಶೈಕ್ಷಣಿಕ ವಿಚಾರಗಳು ಹಾಗೂ ಸನ್ಮಾನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶೈಕ್ಷಣಿಕವಾಗಿ ಹೊಸ ಕ್ರಾಂತಿ ಮಾಡಬಲ್ಲ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರೂ ಮುತುವರ್ಜಿಯಿಂದ ಶ್ರಮಿಸೋಣ. ಅದಕ್ಕೆ ಸಂಘಟನೆಯ ಪರವಾಗಿ ನಮ್ಮ ಸಂಪೂರ್ಣ ಸಹಕಾರವಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಸಂಘದ ಕಾರ್ಯದ ಜೊತೆಗೆ ಸಂಘಟಿಸುವ ಮೂಲಕ ಗುಣಾತ್ಮಕ ಶಿಕ್ಷಣದತ್ತ ತೊಡಗಿಸುವ ಯೋಜನೆ ರೂಪಿಸಲಾಗಿದೆ” ಎಂದರು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಎಫ್.ಜಿ.ನವಲಗುಂದ ಮಾತನಾಡಿ, ‘ಇಂದಿನ ಆಧುನಿಕ ಯುಗದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾದರೆ ತಂತ್ರಜ್ಞಾನದ ಪರಿಣತಿ ಅತೀ ಅವಶ್ಯವಾಗಿದೆ. ಶಿಕ್ಷಕರಿಗೆ ತಂತ್ರಜ್ಞಾನದ ವ್ಯವಸ್ಥೆಗೆ ಒಗ್ಗಿಕೊಂಡು ಮಕ್ಕಳನ್ನು ಮುಂದಿನ ದಿನಗಳಲ್ಲಿ ಸಮರ್ಥರನ್ನಾಗಿ ರೂಪಿಸುವ ಜವಾಬ್ದಾರಿ ಇದೆ ಎಂದು ಹೇಳಿ, ಶಿಕ್ಷಣದಲ್ಲಿ ತಂತ್ರಜ್ಞಾನ ಕುರಿತು ತಿಳಿಸಿದರು.

- Advertisement -

‘ಕೋವಿಡ್‍ನಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಲು ಸನ್ನದ್ಧರಾಗಬೇಕಿದೆ. ಜೊತೆಗೆ ಸರಕಾರಿ ಶಾಲೆಗಳ ಹಾಗೂ ಕನ್ನಡ ಭಾಷಾ ಉನ್ನತೀಕರಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯ’ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ ಬೆಳವಡಿ, ಎಸ್.ಬಿ. ಗುಡಿ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ರಮೇಶ ಚಿಕ್ಕುಂಬಿ ಹಾಗೂ ಸಂಘದ ಅಧ್ಯಕ್ಷರಿಗೆ ಹಾಗೂ ಸಂಘದ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.

- Advertisement -

ಸನ್ಮಾನಿತರ ಪರವಾಗಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ ಮಾತನಾಡಿ, “ಸಂಘಟನೆಯ ಮೂಲಕ ಶಿಕ್ಷಕರ ಕುಂದುಕೊರತೆಗಳನ್ನು ನಿವಾರಿಸಲು ಸಾಧ್ಯ. ಗುರುಭವನ ಕಾಮಗಾರಿ ಕೂಡ ಹಲವಾರು ತೊಂದರೆಗಳನ್ನು ದಾಟಿ ಈಗ ಮತ್ತೆ ಚಾಲನೆ ಪಡೆದಿದೆ. ಮುಂದಿನ ವರ್ಷದ ಸಪ್ಟೆಂಬರ್ ವೇಳೆಗೆ ಶಾಸಕರ ಸಹಕಾರ ದಿಂದ ಪೂರ್ಣ ಗೊಳಿಸುವ ಯೋಜನೆ ರೂಪಿಸಲಾಗಿದೆ. ಈ ದಿಸೆಯಲ್ಲಿ ಕೂಡ ನೂತನ ಅಧ್ಯಕ್ಷ ರಿಗೆ ಎಲ್ಲರ ಸಹಕಾರ ಕೂಡ ಮುಖ್ಯ. ನಾನೂ ನಿವೃತ್ತ ನಾದರೂ ಕೂಡ ತಮ್ಮೊಂದಿಗೆ ಸದಾ ಇರುತ್ತೇನೆ ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯನಿ ಎಲ್.ವೈ. ಕಾರಿಮನಿ, ಸಿಆರ್‍ಪಿ ಕುಶಾಲ ಮುದ್ದಪ್ಪನವರ, ಡಿ.ಜಿ.ಅವಟೆ, ಜಿ.ಐ. ಪಾಟೀಲ, ಎಮ್.ಜಿ.ಕುಲಕರ್ಣಿ,ಎಸ್.ಬಿ. ಮಾದರ, ಸವಿತಾ ಹಾವನ್ನವರ, ಅಶೋಕ ಹೂಲಿ, ಕಡೆಮನಿ ಹಾಗೂ ಶಿಕ್ಷಕರು ಇದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸವಿತಾ ಹಾವನ್ನವರ ಪ್ರಾರ್ಥನೆ ಗೀತೆ ಹಾಡಿದರು. ಎಸ್. ಡಿ. ಮಾದರ ಸ್ವಾಗತಿಸಿದರು. ಜಿ. ಐ. ಪಾಟೀಲ ನಿರೂಪಿಸಿದರು. ಡಿ. ಎಸ್. ಕೊಪ್ಪದ ವಂದಿಸಿದರು.

- Advertisement -
- Advertisement -

Latest News

ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಸಿಂದಗಿ: ಪಟ್ಟಣದ ವೈಷ್ಣವಿ ಹೋಟೆಲಿನಲ್ಲಿ ಸಿದ್ದು ಗೌಡ ಪಾಟೀಲ್ ಇವರ ಪರಿವಾರ ವತಿಯಿಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳಿಗೆ  ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ...
- Advertisement -

More Articles Like This

- Advertisement -
close
error: Content is protected !!
Join WhatsApp Group