- Advertisement -
ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ ಕರೆಯಬೇಕು ಸಭೆ ಕರೆಯುವ ಮುನ್ನ ಎಲ್ಲ ಸದಸ್ಯರಿಗೆ ಅಜಂಡಾ ಸ್ವೀಕರಿಸಬೇಕು ಎಂದು 8ನೇ ವಾರ್ಡ ಸದಸ್ಯೆ ಖೈರೂನಬಿ ನಾಟೀಕಾರ ಅವರು ಪುರಸಭೆಯ ಮುಖ್ಯಾಧಿಕಾರಿಗೆ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಅರ್ಜಿ ಸಲ್ಲಿಸಿರುವ ಅವರು, ಕನಿಷ್ಟ 5,6 ತಿಂಗಳಿನಿಂದ ಪುರಸಭೆಯ ಖರ್ಚು ವೆಚ್ಚಗಳ ಬಗ್ಗೆ ಯಾವುದೇ ಸಭೆ ನಡೆಸಿರುವುದಿಲ್ಲ. ಹಾಗಾಗಿ ಮುಂದಿನ ಅಭಿವೃದ್ಧಿ ಕೆಲಸಗಳಿಗಾಗಿ ಸಾಮಾನ್ಯ ಸಭೆ ಕರೆಯುವುದು ಅವಶ್ಯಕತೆಯಿದ್ದು ಕೂಡಲೇ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸಾಮಾನ್ಯ ಸಭೆ ಕರೆಯಬೇಕು ಎಂದು ವಿನಂತಿಸಿದ್ದಾರೆ.