- Advertisement -
ಗೋಕಾಕ: ಇಲ್ಲಿಯ ಬಸ್ ಘಟಕದಿಂದ ಗೋವಾದ ಮಡಗಾಂವ ವರೆಗೆ ಪ್ರತಿದಿನ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಬಿಡುವ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡ ಸತ್ತೆಪ್ಪ ಕರೆವಾಡಿ ಅವರ ನೇತೃತ್ವದಲ್ಲಿ ಬುಧವಾರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಮಡಗಾಂವ ಹೋಗಲು ಬಸ್ ವ್ಯವಸ್ಥೆ ಇತ್ತು, ಆದರೆ ಕೆಲ ವರ್ಷಗಳಿಂದ ಬಂದ್ ಮಾಡಿರುವ ಕಾರಣದಿಂದ ಇಲ್ಲಿಂದ ಅಲ್ಲಿಗೆ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಬಸ್ ಆರಂಭಿಸುವ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ನ ಮುಖಂಡರಾದ ಕಾಡಪ್ಪ ಮೇಸ್ತ್ರಿ, ರವಿ ಕಡಕೋಳ, ಲೋಕೇಶ ಕರೆವಾಡಿ, ರಮೇಶ ಮಾದರ ಇದ್ದರು.