spot_img
spot_img

ಕವನ: ಸಾರ್ಥ

Must Read

spot_img

ಸಾರ್ಥ

ಸ್ವಾಭಿಮಾನಿಗೆ ಯಾವ ನಿರೀಕ್ಷೆ
ಸರ್ವ ದಿಕ್ಕಿನಿಂದಲೂ ಉಪೇಕ್ಷೆ
ಹಸಿದವ ಉಂಡವ ಉಭಯತ
ರಲ್ಲಿ ಸಿಲುಕಿ ಕೌತುಕದಿ ಕಣ್ಬಿಟ್ಟವ

ಯಾರ ಯಾವ ಪರಿಗಣನೆಗೆ
ಬಾರದ ವ್ಶಕ್ತಿತ್ವ ಭಾವಜೀವ
ಅತ್ತ ಹಸಿದವ ಇತ್ತ ತುಂಬಿದವ
ನೆತ್ತಿಗೇರಿದವರ ಮಧ್ಶ ಒದ್ದಾಡುವವ

ಯಾರದೆ ಕೊಂಕು ಕುಚೇಷ್ಟೆಗೆ
ತಲೆ ಬಿಸಿಯಿಲ್ಲದೆ ಮಿಡಿಯುವ
ಯಾರ ಕಾಳಜಿಗೂ ದಕ್ಕದವ
ಯಾರ ಗಣನೆಗೂ ಸಿಕ್ಕದವ

ಹೆಳವ ಮುಳುವ ಎಡ ಬಲ ಸಪ್ರೇಮ
ಎಗ್ಗಿಲ್ಲದ ಗೌಜಿಲ್ಲದ ಬದುಕಿನ ಮಮ
ತೋಳಬಲ ಸಾಮರ್ಥ್ಮದ ದಿಟ ಬದುಕು
ಕಾಯಕವೆ ಕೈಲಾಸವೆಂದ ನಿಜ ಶ್ರಮಿಕ.

ಸಹನೆ ಶ್ರಮ, ಕ್ಷಮತೆ ಮಮತೆ ಗೊತ್ತು
ಅತ್ತ ದರಿ ಇತ್ತ ಪುಲಿ ಹೆಗಲ, ಹೊತ್ತು!
ವ್ಶವಧಾನ ತನುಮನದಿಂದ ಕೈಜೋಡಿಸಿ
ಯುಕ್ತಾಯುಕ್ತ ಸಹಜತೆಯಿಂದ ಸ್ಪಂದಿಸಿ

ವಿಕಾರ ಭಾವ ಇವನದ್ದೆಂದು
ಹಲ-ಕೆಲವರ ಮನಸ್ಸಿಗೆ ತಾಕದವ
ಸಾಪೇಕ್ಷ ನಿರಪೇಕ್ಷ ಎಲ್ಲ ಮೂಲದ್ರವ್ಶ
ಜೀವ ಜತನಕ್ಕಿರಲಿ, ತುಡಿತ-ಮಿಡಿತ

ತನ್ನ ಕಷ್ಟ ಕಾರ್ಪಣ್ಶ ಬವಣೆಯೆಂದು
ಯಾರಲ್ಲೂ ಹೇಳಲಾಗದೆ ಹೋದವ
ಆದರೂ ಜೀವಕೆ ಜೀವ ಕೊಡುವವ
ಮಧ್ಶಮನೋ ಅಧಮನೋ ಮಾತಿನ ಭುಕ್ತಿ
ಕಾಕದೃಷ್ಟಿ ತೋಳ ತೆಕ್ಕೆಯಲಿ, ಬಿಟ್ಟ ಪಿಳಿಪಿಳಿ

ಸಾವರಿಸಿಕೊಳ್ಳ ಬೇಕಾದ ಸಂಕಷ್ಟವು
ಅಡ್ಕತ್ತರಿಗೆ ಸಿಕ್ಕಿದಂಥ ಮನೋಗತ, ಸ್ಥಿತ
ಮಾನಾಪಮಾನದಲ್ಲಿ ಸರಿದಾರಿ ನಡೆದದ್ದು
ಜೀವನ ಪಥವದು ಸಾರ್ಥ ಗಟ್ಟಿ ಮುಟ್ಟಿಗ !!


ಅಮರ್ಜಾಾ
ಅಮರೇಗೌಡ ಪಾಟೀಲ ಜಾಲಿಹಾಳ,
ಕುಷ್ಟಗಿ


ಅಂತರಾಳ: ಅತ್ತ ಬಡವ-ಹಸಿದವ ಇತ್ತ ಬಲಾಢ್ಶ-ಹೊಟ್ಟೆ ಬಿರಿದವ ನಟ್ಟನಡುವೆ ಇರುವ ಅಪಾರ ಜನಸ್ತೋಮ. ಹೇಳಲಿಕ್ಕಿವೆ ಮಾತುಗಳು, ಗಂಟಲಿಂದೀಚೆಗೆ ಹೊರಬಾರದೆ ಸಿಕ್ಕಿ , ಹೇಳುವದೇನಿದೆ ಎಂದ, ನೊಂದ. ದೇಶದ ಹಾರ ಭಾರ ಹೊತ್ತು ಮುನ್ನಡೆಯುತ್ತಿರುವ ಅಪಾರ ನಿಷ್ಕಾಮ ಕರ್ಮಿ ಕಾರುಣ್ಶರು, ಅವರಿಗಾಗಿ ಸಮರ್ಪಿತ.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!