spot_img
spot_img

ದಿ. ೩ ರಿಂದ ಮೂಡಲಗಿಯಲ್ಲಿ ಸತ್ಸಂಗ ಸಮ್ಮೇಳನ   

Must Read

spot_img
     ಮೂಡಲಗಿ:- ಪಟ್ಟಣದ ಆರ್.ಡಿ.ಎಸ್ ಕಾಲೇಜಿನ ಮೈದಾನದಲ್ಲಿ ವಿಶ್ವ ಶಾಂತಿಗಾಗಿ “15 ನೆಯ ಸತ್ಸಂಗ ಸಮ್ಮೇಳನ “ಡಿಸೆಂಬರ್,03 ರಿಂದ 09  ರವರೆಗೆ ಏಳು ದಿನಗಳ ಕಾಲ ಸಂಜೆ,6 ಗಂಟೆಗೆ ಶ್ರೀಗಳ ನೇತೃತ್ವದಲ್ಲಿ ಪ್ರವಚನ,ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ವೇದ ಮೂರ್ತಿ ಶಂಕ್ರಯ್ಯ ಹಿರೇಮಠ ಸತ್ಸಂಗ ಕರಪತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ತಿಳಿಸಿದರು.
   ಸಾಧು ಸಂಸ್ಥಾನ ಮಠ ಇಂಚಲ  ಶ್ರೀ ಡಾllಶಿವಾನಂದ ಭಾರತಿ ಮಹಾಸ್ವಾಮೀಜಿಯವರ ಉದ್ಘಾಟನೆಯಲ್ಲಿ ಹಾಗೂ ಚಿದಂಬರಾಶ್ರಮ ಸಿದ್ದರೂಢ ಮಠ ಬೀದರ ಶ್ರೀ ಡಾllಶಿವಕುಮಾರ ಮಹಾಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ ಎಂದರು.
     ಸಿದ್ದರೂಢ ಮಠ,ಮಹಾಲಿಂಗಪೂರ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಎಮ್.ಎ.ಪೂರ್ಣಪ್ರಜ್ಞಾ ಯೋಗಾಶ್ರಮ ಮಠ, ಕಲಬುರ್ಗಿ ಶ್ರೀ ಮಾತೊಶ್ರೀ ಲಕ್ಷ್ಮೀ ತಾಯಿಯವರು, ಸಿದ್ದಾರೂಢ ಮಠ, ಜೋಡುಕುರಳಿ ಶ್ರೀ ಚಿದ್ಘನಾನಂದ ಮಹಾಸ್ವಾಮಿಗಳು, ಅಡವಿಸಿದ್ದೇಶ್ವರ ಮಠ,ಶಿವಾಪೂರ (ಹ) ಶ್ರೀ ಅಡವಿಸಿದ್ದರಾಮ ಮಹಾಸ್ವಾಮಿಗಳು, ಮೈಲಾರಲಿಂಗೇಶ್ವರ ದೇವಸ್ಥಾನ ,ಶ್ರೀ ಸಿದ್ದೇಶ್ವರ ಆಶ್ರಮ,ಇಟನಾಳ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಪ್ರವಚನ, ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.
ನೇಮಿನಾಥ ಬೇವಿನಕಟ್ಟಿ, ವಿಲಾಸ ನಾಶಿ, ತಮ್ಮಣ್ಣ ಗಡಾದ ಹಾಗೂ ಹಣಮಂತ ಗುಬಚಿ ಉಪಸ್ಥಿತರಿದ್ದರು.
- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group