ಹಲವರಿಗೆ ಎಲ್ಲಾ ಸಂಘಟನೆಯಲ್ಲಿರುವ ಉತ್ತಮ ವಿಚಾರ ತಿಳಿಯೋ ಆಸಕ್ತಿಯಿದ್ದರೂ ಕೆಲವೊಮ್ಮೆ ತಮ್ಮ ಆತ್ಮಸಾಕ್ಷಿಗೆ ವಿರುದ್ದ ನಡೆಯಲಾಗದೆ ತಟಸ್ಥರಾಗಬೇಕಾಗುತ್ತದೆ. ವಿಚಾರಗಳನ್ನು ತಿಳಿಯುವುದರಿಂದ ಜ್ಞಾನ ಹೆಚ್ಚಾಗುತ್ತದೆ ನಿಜ, ಆದರೆ ವಿಚಾರದಿಂದ ನಮ್ಮತನ ನಷ್ಟವಾಗೋ ಸಾಧ್ಯತೆ ಇದ್ದರೆ ಬಿಟ್ಟು ಹೊರಬರಬೇಕು.
ಇಲ್ಲ ಸುಮ್ಮನಿರಬೇಕು. ಇಡೀ ವಿಶ್ವ, ದೇಶವನ್ನು ಯಾರೊಬ್ಬರಿಂದ ಸರಿಪಡಿಸಲಾಗದು.ಆದರೆ, ಎಲ್ಲರನ್ನೂ ಆವರಿಸಿರುವ ಸಾಮಾನ್ಯಜ್ಞಾನ ದಿಂದ ಒಗ್ಗಟ್ಟು ಬೆಳೆಸಿಕೊಂಡರೆ ಅವರವರ ಚೌಕಟ್ಟಿನಲ್ಲಿ ಬದಲಾವಣೆ ತರಬಹುದು. ಆದರೆ ಚೌಕಟ್ಟಿನಲ್ಲಿ ವಿರೋಧಿಗಳು ರಾಜಕೀಯತೆ ಹೆಚ್ಚಾದರೆ ಚೌಕಟ್ಟಿನಲ್ಲಿ ಹೊರಬರೋದರಲ್ಲಿ ಅರ್ಥ ವಿದೆ.
ಈಸಬೇಕು ಇದ್ದು ಜೈಸಬೇಕು.ಎಂದರೆ ಪ್ರತಿಯೊಂದು ಪರಮಾತ್ಮನ ಇಚ್ಚೆಯಂತೇ ನಡೆದಿರುವಾಗ ವಿರೋಧಿಸಿ ಉಪಯೋಗವಿಲ್ಲ. ನಮ್ಮನ್ನು ನಾವು ಗಟ್ಟಿ ಮಾಡಿಕೊಳ್ಳುವಷ್ಟು ಸದ್ವಿಚಾರ ಪಡೆದು ಎಲ್ಲರೊಂದಿಗಿದ್ದೂ ಇಲ್ಲದಂತಿದ್ದರೆ ನಮ್ಮತನ, ಆತ್ಮರಕ್ಷಣೆ ಕಷ್ಟವಿಲ್ಲ.
ಆದರೆ ನಾವು ಯಾರಿಂದಲೂ ಪ್ರತಿಫಲ ಬಯಸದಿದ್ದರೆ ಮಾತ್ರ ಸಾಧ್ಯ. ಪ್ರತಿಫಲ ಪಡೆದು ತಿರುಗಿ ನಿಲ್ಲೋದೆ ಅಧರ್ಮ ವಾಗುತ್ತದೆ. ಸಂಘಟನೆಯಿಂದ ಒಗ್ಗಟ್ಟು ಹೆಚ್ಚಾದರೆ ಬಲವಿರುತ್ತದೆ. ಸಂಘರ್ಷದ ರಾಜಕೀಯತೆ ಇದ್ದರೆ ದುರ್ಭಳಕೆ ಹೆಚ್ಚಾಗುತ್ತದೆ. ಅಸಂಖ್ಯಾತ ಸಂಘಗಳಿಗಿಂತ ಒಂದೇ ಸಂಘವಿದ್ದರೆ ತೃಪ್ತಿ, ನೆಮ್ಮದಿ ಸಂತೋಷ ಎಲ್ಲಾ ಸಂಘಗಳಿಂದಲೂ ಒಂದೊಂದು ಕಲಿಯೋ ವಿಚಾರವಿರುತ್ತದೆ.
ಇದು ಸದ್ವಿಚಾರದ ಸತ್ಸಂಗ ವಾದರೆ ಉತ್ತಮ ಬೆಳವಣಿಗೆ. ಒಂದೇ ದೇಶದೊಳಗಿರುವ ಅಸಂಖ್ಯಾತ ಸಂಘಗಳು ದೇಶದ ಪರ ನಿಂತು ನಿಸ್ವಾರ್ಥ ಸೇವೆ ಮಾಡಿದರೆ ದೇಶೋದ್ದಾರ. ಸಂಘಗಳೇ ಸ್ವಾರ್ಥ ಕ್ಕೆ ಕಟ್ಟುಬಿದ್ದು ರಾಜಕೀಯ ನಡೆಸಿದರೆ ದೇಶಕ್ಕೆ ಕಷ್ಟ ನಷ್ಟ.
ಸತ್ಸಂಗಗಳಾಗಲಿ ಯಾವುದೇ ಸಂಘಟನೆಯಾಗಲಿ ಅತಿಯಾದ ರಾಜಕೀಯಕ್ಕೆ ಒಳಪಟ್ಟರೆ ಸಂಘರ್ಷಣೆಯೇ ಹೆಚ್ಚು. ಒಗ್ಗಟ್ಟಿನಿಂದ ಮುಂದೆ ನಡೆಯೋದು ಸಂಘಗಳ ಉದ್ದೇಶ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು