ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಕಂಬಳಿ
ಪ್ಲಾಟದಲ್ಲಿ ಪ್ರತಿವರ್ಷದಂತೆ ಶ್ರೀ ವೀರಭದ್ರೇಶ್ವರ ಜಾತ್ರೆ ನಡೆಯುತ್ತದೆ.
ಪ್ರತಿ ವರ್ಷದಂತೆ ಈ ವರ್ಷವು ಮಂಗಳವಾರ ದಿ.
೨೯ ಹಾಗೂ ಬುದವಾರ ದಿ, ೩೦ರಂದು ಎರಡು ದಿನಗಳು ಶ್ರೀ
ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರಗುವದು.
ಮಂಗಳವಾರ ದಿ, ೨೯ ರಂದು ಬೆಳಗ್ಗೆ
ವೀರಭದ್ರೇಶ್ವರನಿಗೆ “ವಿಶೇಷ ಪೂಜೆ”, ಸಂಜೆ
ಗ್ರಾಮದ ಆದಿ ಶಕ್ತಿ ದೇವತೆಯಾದ ಶ್ರೀ ಲಕ್ಷ್ಮೀದೇವಿಯ
“ಪಲ್ಲಕ್ಕಿ ಉತ್ಸವ” ಮಹಿಳೆಯರು ಆರತಿ, ಸಕಲ ವಾದ್ಯ ವೃಂದ ಜೊತೆಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳುವರು.
ಬುಧವಾರ ದಿ, ೩೦ರಂದು ವೀರಭದ್ರೇಶ್ವರನಿಗೆ “ಮಹಾಭಿಷೇಕ” ಹಾಗೂ ಪೂಜೆಯೂಂದಿಗೆ ಶ್ರೀ ಮಹಾ
ಲಕ್ಷ್ಮೀದೇವಿಗೆ ಉಡಿತುಂಬುವುದು ಕಾರ್ಯಕ್ರಮ ಜರಗುವವು. ಮಧ್ಯಾಹ್ನ ೧೨ ಗಂಟೆಗೆ ಬಂದಂತಾ ಭಕ್ತರಿಗೆ “ಮಹಾ ಪ್ರಸಾದ” ವ್ಯವಸ್ಥೆ ಇರುವುದು. ಸಾಯಂಕಾಲ ೩ ಗಂಟೆಗೆ “ಪುರವಂತರ ಸೇವಾ” ಪಲ್ಲಕ್ಕಿ ಹಾಗೂ ಕರಡಿ ಮಜಲದೊಂದಿಗೆ ದೇವರ ಮೂರ್ತಿಗೆ ಭವ್ಯ ಉತ್ಸವ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಬಸವೇಶ್ವರ ದೇವಸ್ಥಾನದವರೆಗೆ ತೆರಳಿ ಬಸವೇಶ್ವರನಿಗೆ ಮಹಾಮಂಗಳಾರತಿ ಮಾಡಿ ಮರಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಬರುತ್ತದೆ. ರಾತ್ರಿ ೯ ಗಂಟೆಗೆ
ಶಾಲಾ ಮಕ್ಕಳಿಂದ “ರಸಮಂಜರಿ” ಕಾರ್ಯಕ್ರಮ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮೂಡಲಗಿಯ
ಶ್ರೀ ಶ್ರೀ ದತ್ತಾತ್ರೇಯ ಸ್ವಾಮಿಗಳು ಸಿದ್ದ ಸಂಸ್ಥಾನ
ಮಠ, ಮೂಡಲಗಿ. ಮೈಲಾರಲಿಂಗೇಶ್ವರ ದೇವಸ್ಥಾನದ
ಶ್ರೀ ಸಿದ್ದೇಶ್ವರ ಆಶ್ರಮದ ಶ್ರೀ ಸಿದ್ದೇಶ್ವರ ಶರಣರು
ಇಟನಾಳ, ಗ್ರಾಮದ ವೇದ ಮೂರ್ತಿಗಳಾದ ಈರಯ್ಯಾ
ಹಿರೇಮಠ, ರುದ್ರಯ್ಯಾ ಹಿರೇಮಠ, ಬಸಯ್ಯಾ
ಮೂಜನಿದಾರ ಈ ಎಲ್ಲ ಶ್ರೀಗಳು ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವವು.
ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರಾದ
ಬಾಲಚಂದ್ರ ಲ ಜಾರಕಿಹೊಳಿ ವಹಿಸುವವರು.
ಮುಖ್ಯ ಅತಿಥಿಗಳಾಗಿ ಶ್ರೀಶೈಲ ಬ್ಯಾಕೂಡ ಸಿ.ಪಿ.ಆಯ್ ಮೂಡಲಗಿ,ರಾಜು ಪೂಜೇರಿ ಪಿ ಎಸ್ ಆಯ್
ಮೂಡಲಗಿ,ಹಾಗೂ ಗ್ರಾಮದ ಸಕಲ ಗುರು ಹಿರಿಯರು
ಆಗಮಸಿಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಕಮಿಟಿಯವರು ತಿಳಿಸಿದ್ದಾರೆ.