ಸಿಂದಗಿ: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಜೂ 25 ಮತ್ತು 26 ರಂದು ಸಿದ್ಧ ಸಮಾಧಿ ಯೋಗ ತರಬೇತಿ ಶಿಬಿರವು ಸಾಯಂಕಾಲ 06-00 ಗಂಟೆಗೆ ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪ ಹಮ್ಮಿಕೊಳ್ಳಲಾದೆ ಕಾರಣ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಇದರ ಪ್ರಯೋಜನಗಳು ಮಾನಸಿಕವಾಗಿ : ಉದ್ವೇಗ, ಭಯ, ಕೋಪ, ಚಂಚಲತೆ, ಮರೆವು, ದುಶ್ಚಟ, ಅನಿದ್ರೆ, ಇತ್ಯಾದಿ ದೀರ್ಘವ್ಯಾದಿಗಳಿಂದ ಬಿಡುಗಡೆ
ದೈಹಿಕವಾಗಿ: ರಕ್ತದೊತ್ತಡ, ಮಧುಮೇಹ, ಸಂಧಿವಾತ, ಕರುಳ, ಹುಣ್ಣು, ಅಸ್ತಮಾ, ಗ್ಯಾಸ್ಟಿಕ್, ಸಮಸ್ಯೆ ಇತ್ಯಾದಿ ದೀರ್ಘ ಕಾಯಿಲೆಗಳಿಂದ ಬಿಡುಗಡೆ.
ಸಾಮಾಜಿಕವಾಗಿ: ಜನರಲ್ಲಿ ಪರಸ್ಪರ ಸ್ನೇಹ ಪ್ರೇಮಾನುಭಾವ ಸರ್ವಧರ್ಮ ಸಮನ್ವಯ, ಜ್ಞಾನ ಪ್ರೀತಿ-ವಿಶ್ವಾಸ, ಹೊಂದುವುದು.
ವ್ಯಾಪರಸ್ಥರಿಗೆ : ವ್ಯವಹಾರದಲ್ಲಿ ಉತ್ತಮ ತಿಳುವಳಿಗೆ, ಒಳ್ಳೆಯ ಬಾಂಧವ್ಯಲಭಿಸುವುದು.
ಉದ್ಯೋಗಸ್ಥರಿಗೆ: ಸದಾ ಚಟುವಟಿಕೆಯಿಂದ, ಉತ್ಸಾಹದಿಂದ ನೆಮ್ಮದಿಯಾಗಿ ಜೀವನ ನಡೆಸುವುದು.
ಮಹಿಳೆಯರಿಗೆ : ಗೃಹ ಕೆಲಸಗಳಿಂದ ಸದಾ ಹುರುಪು ಹೆಚ್ಚು ಕೆಲಸ ಮಾಡುವ ಶಕ್ತಿ ಸಂತೋಷ ನೆಮ್ಮದಿ (ಪ್ರೀತಿ, ವಿಶ್ವಾಸ, ಧೈರ್ಯ) ಲಭಿಸುವುದು.
ಆಯಾಸವಾಗದೆ ಸಾಕಷ್ಟು ಕೆಲಸ ಮಾಡುವ ಶಕ್ತಿ ಲಬಿಸುವುದು ಅಲ್ಲದೆ ರೈತರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ: ಸ್ಮರಣಶಕ್ತಿಯ ಹೆಚ್ಚಳ, ಅಧ್ಯಯನದಲ್ಲಿ ಏಕಾಗ್ರತೆ, ದಣಿವಿಲ್ಲದ ಸತತ ಓದಿ ಇತ್ಯಾದಿ
(ಪ್ರಾಣಾಯಾಮ ಧ್ಯಾನ, ಯೋಗಾಸನ, ಸೂರ್ಯ ನಮಸ್ಥಾರ, ಗಾಯತ್ರಿ ಮಹಾಮಂತ್ರೋಪದೇಶ ಇತ್ಯಾದಿ ಕಲಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಲಿ)
ಅನೇಕ ದುಶ್ಚಟಗಳಾದ ಧೂಮ್ರಪಾನ, ಮದ್ಯಪಾನ, ಕೋಪ, ಉದ್ವೇಗಗಳನ್ನು ಹೋಗಲಾಡಿಸಿ, ಮನಃಶಾಂತಿ ಒದಗಿಸುವ ಉದ್ದೇಶವಿರುವ ಈ ಶಿಬಿರಕ್ಕೆ ತಮಗೆಲ್ಲರಿಗೂ ಮುಕ್ತವಾಗಿ ಸುಸ್ವಾಗತ ಶಿಬಿರದಲ್ಲಿ ಭಾಗವಹಿಸುವವರು ಮುಂಚಿತವಾಗಿ ಕೆಳಕಂಡ ವಿಳಾಸದಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ
- ಶ್ರೀ ರಾಮಕೃಷ್ಣ ಗುರೂಜ : 9448580617
- ಶ್ರೀ ಪ್ರಕಾಶ ಕಗ್ಗೋಡ : 9591811278
- ಶ್ರೀ ಶಿವಅಂಗ ಭತ್ತಗೌಡರ : 9880271616
- ಶ್ರೀ ಗುರು ಜರಾದಾರ (ಮದಲಿ) : 9902839418
- ಶ್ರೀ ಸಿದ್ದು ಶಿವಣಗಿ : 7353093945
- ಶ್ರೀ ಗುರು ಟೇಲರ್ : 9342904506 ಇವರನ್ನು ಸಂಪರ್ಕಿಸುವಂತೆ ಕೊರಿದ್ದಾರೆ.