ಹಾಸನ – ‘ನಮ್ಮ ಊರು ಹಾಸನ’ ಎಂಬ ತಮ್ಮ ಮೌತ್ನಳ್ಳಿ ಶಂಕರಯ್ಯನವರ ಮಗನಾದ ರಮಾಶಂಕರ್ ಬಾಬು ರವರು ನೆನ್ನೆ ರಾತ್ರಿ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ನಮ್ಮ ಊರು ಹಾಸನ ಸ್ವರಚಿತ ಹಾಡನ್ನು ಸಾಂಸ್ಕೃತಿಕ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಹಾಡುತ್ತಿದ್ದ ಗಾಯಕ ಆರ್. ರಾಮ ಶಂಕರ ಬಾಬು ನಿಧನಕ್ಕೆ ಹಲೋ ಹಾಸನ್ ಪತ್ರಿಕೆಯೆ ಸಂಪಾದಕರು ರವಿ ನಾಕಲಗೂಡು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ನಾಯಕರ ಹಳ್ಳಿ ಮಂಜೇಗೌಡ, ಸಾಹಿತಿ ಗೊರೂರು ಅನಂತರಾಜು, ಕಲಾವಿದರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ರವಿ ಬಿದರಿ, ಕಾರ್ಯಾಧ್ಯಕ್ಷರು ಡಿ. ಬಿ. ನಾಗಮೋಹನ್, ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಚೈತ್ರ ನಾಯಕರ ಹಳ್ಳಿ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಮಧು ನಾಯಕ್ ಲಂಬಾಗಿ, ಕಲಾವಿದರುಗಳಾದ ಹೆಚ್.ಎಂ.ಪ್ರಭಾಕರ್, ಶಶಿ ಸಾಲಗಾಮೆ, ರಮೇಶ ಗೌಡಪ್ಪ, ಸಿ.ಎಂ.ಶ್ರೀಕಂಠಪ್ಪ, ಸಾಣೆಹಳ್ಳಿ ಸೋಮಶೇಖರ್, ಎರೇಹಳ್ಳಿ ಮಂಜೇಗೌಡ, ಪ್ರಕಾಶ ತಟ್ಟೇಕರೆ, ಕುಶಾಲ್ ಕಲ್ಲಯ್ಯ, ಚಂದ್ರಶೇಖರ್ ಸಿಗರನಹಳ್ಳಿ, ಕತ್ತಿಮಲ್ಲೇನಹಳ್ಳಿ ಪರಮೇಶ, ಯಲಗುಂದ ಶಾಂತಕುಮಾರ್, ಶಂಭುನಾಥಪುರ ಪುಟ್ಟೇಗೌಡರು, ಲೇಖಕ ಗೊರೂರು ಶಿವೇಶ, ಕಾದಂಬರಿಗಾರ್ತಿ ಶೈಲಜಾ ಸುರೇಶ್, ಎ.ಸಿ. ರಾಜು, ಹೆಚ್.ಜಿ.ಗಂಗಾಧರ್, ಗಾಯಕ ಸುನಿಲ್ ಆಡುವಳ್ಳಿ, ರಂಗನಾಥ್ ಡ್ಯಾಬ ವೈಭವ್ ವೆಂಕಟೇಶ, ಕಲಾವಿದ ಗೊರೂರು ಯಾಕೂಬ್, ಜಗದೀಶ ರಾಮಘಟ್ಟ, ಪ್ರದೀಪ ಗವೇನಹಳ್ಳಿ ಅವರುಗಳ ಮೃತರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

