spot_img
spot_img

ಶ್ರೀ ಪಂಚಲಿಂಗೇಶ್ವರ ದೇವಾಲಯ ಕಾರ್ತಿಕೋತ್ಸವ

Must Read

- Advertisement -

ಮುನವಳ್ಳಿ: ಪಟ್ಟಣದ ಸುಪ್ರಸಿದ್ದ ಐತಿಹಾಸಿಕ ದೇವಾಲಯ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಸಂಜೆ ಕಾರ್ತಿಕೋತ್ಸವ ಸಡಗರದಿಂದ ಜರುಗಿತು.

ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಮುನವಳ್ಳಿ ಸೋಮಶೇಖರಮಠದ ಪರಮಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ವಿಧಾನಸಭಾ ಉಪಸಭಾಪತಿ ಶಾಸಕ ಆನಂದ ಮಾಮನಿ,ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪಂಚಪ್ಪ ಗೋಪಶೆಟ್ಟಿ,ಹಿರಿಯರಾದ ಚಂದ್ರಯ್ಯಸ್ವಾಮಿ ವಿರಕ್ತ ಮಠ,ಬಸವರಾಜ ದೇವಣಗಾವಿ, ಶ್ರೀ ಕಾಂತ ಮಿರಜಕರ,ರಮೇಶ ಗೋಮಾಡಿ,ತಿರಕಪ್ಪ ಕಾಶಪ್ಬಗೋಳ,ವಿನಾಯಕ ಪತ್ತಾರ,ಜಗದೀಶ ಕೌಜಗೇರಿ, ಅಶೋಕ ಬಡೆಮ್ಮಿ, ಗಂಗಾಧರ ಗೋರಾಬಾಳ ಸೇರಿದಂತೆ ಭಕ್ತರು ಗಣ್ಯರು,ಹಿರಿಯರು,ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಮೀತಿಯವರು ಸಕಲ ಸದ್ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಂಗಳಾರುತಿ ಪಲ್ಲಕ್ಕಿ ಸೇವೆ ಮೂಲಕ ಕಾರ್ತಿಕೋತ್ಸವ ಜರುಗಿತು.

- Advertisement -

ಈ ಸಂದರ್ಭದಲ್ಲಿ ಪಂಚಲಿಂಗೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ದೀಪ ಬೆಳಗಿಸಿ ನಂತರ ದೀಪಮಾಲಿಕಾ ಸ್ಥಂಭದಲ್ಲಿ ದೀಪ ಪ್ರಜ್ವಲಿ ಮಾಡಿ ಕಾರ್ತಿಕೋತ್ಸವ ಕ್ಕೆ ಚಾಲನೆ ನೀಡಿದರು. ದೇವಾಲಯದ ಎಲ್ಲಾ ದೇವಾಲಯಗಳ ಸಮುಚ್ಛಯದಲ್ಲಿ ಇರಿಸಲಾಗಿರುವ ಪ್ರಣತೆಗಳಲ್ಲಿ ದೀಪವನ್ನು ಸೇರಿದ ಸಕಲ ಸದ್ಭಕ್ತರು ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಜರುಗಿತು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group