ಸವದತ್ತಿ – ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಶಾಸಕರ ಅನುದಾನದಲ್ಲಿ ತಾಲೂಕಿನ ಗೊರವನಕೊಳ್ಳ ಹತ್ತಿರದ ವಟ್ನಾಳ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನದ ಹತ್ತಿರ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನಿಡಿದರು.
ಈ ಸಂದರ್ಭದಲ್ಲಿ ಗೊರವನಕೊಳ್ಳ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಕಾಶ ರಾವಸಾಹೇಬ ಇನಾಮದಾರ, ಬೂಸೇನಾನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ, ಎಚ್ ಸಿ ಪ್ರಭುಕುಮಾರ, ಸದಸ್ಯರಾದ ಸಲೀಮ ಪಿ ಮುಲ್ಲಾ, ದ್ಯಾಮಪ್ಪ ಹಂಚಪ್ಪನವರ, ಮೌಲಾಸಾಬ ನದಾಫ, ಗ್ರಾಮದ ಮುಖಂಡರಾದ ದೀಪಕ ಇನಾಮದಾರ, ಗುರುಶಿದ್ದಪ್ಪ ಯಮನಪ್ಪನವರ, ಯಲ್ಲಪ್ಪ ವಗ್ಗರ, ನಿಂಗಪ್ಪ ಲಕ್ಕಣ್ಣವರ, ಹೂವಪ್ಪ ಮುನವಳ್ಳಿ ಉಪಸ್ಥಿತರಿದ್ದರು.