- Advertisement -
ಸಿಂದಗಿ: ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಿಂದಗಿಯ ಕರ್ನಾಟಕ ಅದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ಬೆಂಗಳೂರು ರವರು ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಿ. 06-03-2022 ರಂದು ಭಾನುವಾರ ಬೆಳಿಗ್ಗೆ ಸಾಯಿ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ ತಿಳಿಸಿದ್ದಾರೆ.
ಅಭಿನಂದನೆ; ಸಾಯಬಣ್ಣ ದೇವರಮನಿ ಅವರಿಗೆ ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಸಿದ್ದಲಿಂಗ ಚೌದರಿ, ಆನಂದ ಶಾಭಾದಿ, ಬಸವರಾಜ ಅಗಸರ ಸಲೀಮ್ ಮರ್ತುರ, ಪ್ರಕಾಶ ಬಡಿಗೇರ,ಪಂಡಿತ್ ಯಂಪುರೆ, ರಾಜಕುಮಾರ ಭಾಸಗಿ, ಡಾ. ಪ್ರಕಾಶ ರಾಗರಂಜಿನಿ,ಬಸು ಕಡಿಮನಿ, ರಾಮು ವಗ್ಗರ, ಅಶೋಕ ವಗ್ಗರ, ಗುರು ದಶವಂತ, ಮಂಜುನಾಥ ದೊಡಮನಿ, ಮಹಾವಿರ ಸುಲ್ಪಿ,ಕಾರ್ತಿಕ್ ದೇವರಮನಿ ಅಭಿನಂದಸಿದ್ದಾರೆ.