ಬೈಲಹೊಂಗಲ: ಇತ್ತೀಚೆಗೆ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೀರರಾಣಿ ಕಿತ್ತೂರು ಚೆನ್ನಮ್ಮನ ಪುಣ್ಯಭೂಮಿ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಹೆಮ್ಮೆಯ ಕುವರಿ ರೂಪಾ ಚನಗೌಡ ಪಾಟೀಲ ಇವರನ್ನು ಬೈಲಹೊಂಗಲ ಪುರಸಭೆ ಸದಸ್ಯ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ ಅವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು,
ಈ ಸಂದರ್ಭದಲ್ಲಿ ಹಿರಿಯರಾದ ಅನಿಲ ಮೆಟಗುಡ್ಡ, ಜಗದೀಶ್ ಮೆಟಗುಡ್ಡ, ಆನಂದ ತುರಮರಿ, ಫಕ್ರುಸಾಬ ನಧಾಪ್ ಹಾಗೂ ದೇವಲಾಪುರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು