ಸಿಂದಗಿ; 15ರಿಂದ 20 ವಯಸ್ಸಿನ ವಿದ್ಯಾರ್ಥಿಗಳು ಧರ್ಮವನ್ನು ಪರಿಪಾಲನೆ ಮಾಡದೇ ಹೋದರೆ ಜೀವನ ದುಸ್ತರವಾಗುತ್ತದೆ ಅದನ್ನು ಸರಿಯಾಗಿ ಪಾಲಿಸಿದ್ದಾದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ್ ಮನಗೂಳಿ ಹೇಳಿದರು.
ಪಟ್ಟಣದ ಅಂಜುಮಾನ್ ಕಾಲೇಜ್ ಕ್ಯಾಂಪಸ್ನಲ್ಲಿರುವ ಕರ್ನಾಟಕ ಶಿಕ್ಷಣ ಸೊಸೈಟಿ ಹಾಗೂ ಅಂಜುಮಾನ್-ಇ-ಇಸ್ಲಾಂ ಎಜುಕೇಶನ್ ಸೊಸೈಟಿ ಜಂಟಿಯಾಗಿ ಆಯೋಜಿಸಲಾಗಿದ ಫಾಲ್ಕನ್ ಹೊಸ ಯುಗದ ವಿಜ್ಞಾನ ಮತ್ತು ವಾಣಿಜ್ಯ ಪ ಪೂ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಧರ್ಮವೆಂದರೆ ಅದೊಂದು ಜಾತಿ ಸೂಚಕ ಪದವಲ್ಲ ಅದು ತತ್ವದ ಸೂಚಕ ಪದವಾಗಿದೆ ಎನ್ನುವುದನ್ನು ಮರೆತು ಧರ್ಮ ಅಂದಾಕ್ಷಣ ಅದಕ್ಕೊಂದು ಬಣ್ಣದ ಲೇಪನ ಮೆತ್ತಿಕೊಳ್ಳುವ ದುಷ್ಕೃತ್ಯ ನಡೆಯುತ್ತಿದೆ ಅದರಿಂದ ದೂರ ಬಂದು ಎಲ್ಲ ಧರ್ಮಗಳ ತಿರುಳುಗಳು ಒಂದೇ ಎಂದು ತಿಳಿದುಕೊಂಡಾಗ ಮಾತ್ರ ಭಾವನಾತ್ಮಕ ಸಂಬಂದ ಬೆಸೆಯಲು ಸಾಧ್ಯವಾಗುತ್ತದೆ. ಕಾರಣ ಬೋಧಕರು ವಿದ್ಯಾರ್ಥಿಗಳಿಗೆ ವಿಷಯ ಬೋಧನೆಯ ಜೊತೆಗೆ ಸಂಸ್ಕಾರ ಬೆಳೆಯುವ ತತ್ವ ಸಾರ ತಿಳಿಸಿಕೊಡಬೇಕು ಅಂದಾಗ ಸಮ ಸಮ ಸಮಾಜ ನಿರ್ಮಾಣ ಮಾಡಬಹುದು ಅದಕ್ಕೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಬೆಂಗಳೂರು ಫಾಲ್ಕನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್ ಮಾತನಾಡಿ, ಮೊದಲು ಡ್ರಗ್ಸಗೆ ಹೊಂದಿಕೊಂಡು ಮಕ್ಕಳ ಜೀವನ ಹಾಳಾಗುತ್ತಿದೆ ಅದೇ ರೀತಿಯಲ್ಲಿ ಇಂದು ಮೊಬಾಯಿಲ್ ಸಂಗಾತಿ ಅದಕ್ಕಿಂತ ಕೆಟ್ಟ ದುರಭ್ಯಾಸ ಮೊಬಾಯಿಲ್ ಬಳಕೆಯಾಗಿದೆ ಬರೀ ಗೂಗಲ್ ಪ್ರಿಯರಾಗಿ ಡಿಗ್ರಿ ಸರ್ಟಿಫಿಕೇಟಗೋಸ್ಕರ ಶಿಕ್ಷಣ ಪಡೆಯದೇ ಮನಪೂರ್ವಕ ಶಿಕ್ಷಣ ಪಡೆದು ಇಂದು ಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಣ ರೂಪಿಸಿಕೊಂಡು ಮೌಲ್ಯಯುತ ಜೀವನ ರೂಪಿಸಿಕೊಂಡು ತಂದೆ-ತಾಯಿ-ಶಿಕ್ಷಣ ಸಂಸ್ಥೆಯ ಗೌರವ ಹೆಚ್ಚಿಸಬೇಕು ಎಂದು ತಿಳಿಸಿದರು.
ಬೆಂಗಳೂರು ಎಚ್.ಸಿ.ಎಲ್ ಕಂಪನಿಯ ನಿರ್ದೆಶಕ ಪವನ ಶರ್ಮಾ ಮಾತನಾಡಿ, ವಿಜ್ಞಾನ ವಿಬಾಗದಲ್ಲಿ ಒಳ್ಳೆಯ ಅಂಕ ಪಡೆದರೆ ಸಾಲದು ಅದಕ್ಕೆ ಪೂರಕವಾಗಿ ನೀಟ್ ಪರೀಕ್ಷೆ ಹೆಚ್ಚಿನ ಅಂಕ ಪಡೆದಾಗ ಮಾತ್ರ ಎಂ.ಬಿಬಿಎಸ್, ಇಂಜನಿಯರಿಂಗ್ ಪ್ರವೇಶ ಪಡೆಯಲು ಸಾಧ್ಯ ಕಾರಣ ಅವೆರಡರ ಕಡೆಗೆ ಮುಖ ಮಾಡದೇ ಜಗತ್ತಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಸಾಕಷ್ಟಿವೆ ಅವುಗಳ ಕಡೆಗೆ ಒಲವು ತೊರಬೇಕು. ಎಚ್ಸಿಎಲ್ ಕಂಪನಿಯು ಹೊಸ ಹೊಸ ಆವಿಷ್ಕಾರ ಹೊಂದಿರುವ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ತರಬೇತಿ ನೀಡುತ್ತದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ರಫೀ ಭಂಡಾರಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ ಬರೀ ಡಾಕ್ಟರರು ಮತ್ತು ಇಂಜನೀಯರರಾಗಿ ದುಡ್ಡು ಗಳಿಸಿದರೆ ಸಾಲದು ಸಮಾಜವನ್ನು ತಿದ್ದಲು ಪತ್ರಕರ್ತರ ಬಳಗ ಕಾರ್ಯವು ಅತ್ಯಮೂಲ್ಯವಾದದ್ದು ಅದಕ್ಕೆ ಸಾಮಾಜಿಕವಾಗಿ ಮುಂದುವರೆಯಲು ಪತ್ರಿಕೊದ್ಯಮದ ಕಡೆಗೆ ಆಸಕ್ತಿ ವಹಿಸಿ ಸಮಾಜದ ಎಡರು ತೊಡರುಗಳನ್ನು ತಿದ್ದುವ ಕಾರ್ಯಕ್ಕೆ ಮುಂದಾಗಿ ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ ರಾಂಪೂರ್ ಪಿ.ಎ.ಆರೂಢಮಠದ ಶ್ರೀ ನಿತ್ಯಾನಂದ ಮಹಾರಾಜರು, ವಿಜಯಪುರ ಸಹಕಾರ ವಿಭಾಗದ ನಿವೃತ್ತ ಜಂಟಿ ರಿಜಿಸ್ಟ್ರಾರ್ ಎಸ್.ಎಸ್.ಬೀಳಗಿಪೀರಾ, ಅಧ್ಯಕ್ಷತೆ ವಹಿಸಿದ ಕರ್ನಾಟಕ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಎಸ್.ಎಂ.ಪಾಟೀಲ (ಗಣಿಹಾರ್) ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ ಎ.ಎ.ದುದನಿ, ನಿರ್ದೇಶಕರಾದ ಮೆಹಬೂಬ್ ಹಸರಗುಂಡಗಿ, ಝಡ್.ಐ.ಅಂಗಡಿ, ಪ್ರಾಚಾರ್ಯ ಶ್ರೀಮತಿ. ಮುಬೀನಾ ಸುಲ್ತಾನ್, ಆಲಮೇಲದ ರಿಯಾಜ್ ಬಿಳವಾರ, ಬಿ.ಎಂ.ಬಿರಾದಾರ, ಎಂ.ಎಸ್.ಹಯಾಳಕರ, ಪಾಲಕರ ಪ್ರತಿನಿಧಿ ಅಲ್ಲಾಬಕ್ಷ ಮುಲ್ಲಾ, ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಧಿಕ ಸುಂಬಡ, ಅಶೋಕ ಕೊಳಾರಿ, ಪ್ರಭುಲಿಂಗ ಲೋಣಿ ವೇದಿಕೆ ಮೇಲಿದ್ದರು.
ಮಹ್ಮದಲಿ ಹುಬಳಿ ಮೌಲಾನಾ ಕುರಾನ ಪಠಣ ಮಾಡಿದರು. ಪೂಜಾ ಮತ್ತು ಸಂಗಡಿಗರು ಭರತನಾಟ್ಯ ಮಾಡಿದರು. ಆಸ್ಪೀಯಾ ಬಂಥನಾಳ, ಶೃತಿ ಮೋರೆ ನಿರೂಪಿಸಿದರು. ಪ್ರಾಧ್ಯಾಪಕ ಐಸ್ವಾಮಿಲು ಸ್ವಾಗತಿಸಿದರು. ಉಪನ್ಯಾಸಕಿ ಸಭಾ ಪಾಟೀಲ ವಂದಿಸಿದರು.