- Advertisement -
ಸಿಂದಗಿ: ಕನ್ನಡದ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹಾಗೂ ಚಿಂತಕ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ರಸ ಋಷಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ನಾವು ಎಲ್ಲರೂ ಅವರಿಗೆ ಗೌರವಯುತ ನಮನ ಸಲ್ಲಿಸಬೇಕು ಎಂದು ಶಾಲಾ ವಿದ್ಯಾರ್ಥಿಗಳಾದ ಗುರುರಾಜ ಶ್ರೀಶೈಲ ಬಿರಾದಾರ, ಸಂದೀಪ ಬಸವರಾಜ ಬಡಿಗೇರ,ಭಾಗಮ್ಮ ಜಾನಪ್ಪ ಬಿರಗೊಂಡ,ಸುಸ್ಮೀತಾ ಮಲ್ಲಿಕಾರ್ಜುನ ದೇವರಮನಿ,ಜ್ಯೋತಿ ದಯಾನಂದ ಹಿರೇಮಠ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಶಾಲಾ ಶಿಕ್ಷಕ ಎನ್.ಎಂ.ಚಪ್ಪರಬಂದ, ನಿಂಗನಗೌಡ ಪಾಟೀಲ,ಚಂದ್ರಶೇಖರ ಬೂಯ್ಯಾರ,ಬಸವರಾಜ ಅಗಸರ, ಸುಮಂಗಲಾ ಕೆಂಭಾವಿ, ಮಲ್ಲಮ್ಮ ಹಿಪ್ಪರಗಿ, ಶ್ರೀದೇವಿ ಕುರ್ಲೆ, ಅಕ್ಷತಾ ಉಡಕೇರಿ ಇದ್ದರು.