Homeಸುದ್ದಿಗಳುತಡವಾಗಿ ನಾಮಪತ್ರ ಹಿಂತೆಗೆತ : ಅಧಿಕಾರಿ ವಿರುದ್ಧ ಕ್ರಮಕ್ಕೆ ಹೊಳೆಪ್ಪ ಶಿವಾಪೂರ ಆಗ್ರಹ

ತಡವಾಗಿ ನಾಮಪತ್ರ ಹಿಂತೆಗೆತ : ಅಧಿಕಾರಿ ವಿರುದ್ಧ ಕ್ರಮಕ್ಕೆ ಹೊಳೆಪ್ಪ ಶಿವಾಪೂರ ಆಗ್ರಹ

ಮೂಡಲಗಿ – ಮೂಡಲಗಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನಾಮಪತ್ರ ಹಿಂತೆಗೆದುಕೊಳ್ಳಲು ಸಮಯ ಮಧ್ಯಾಹ್ನ ೩ ಗಂಟೆಗೆ ಮುಗಿದಿದ್ದರೂ ಸಂಜೆಯವರೆಗೂ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಿದ ಸಹಕಾರ ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೊಳೆಪ್ಪ ಶಿವಾಪೂರ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಮೂಡಲಗಿಯ ಪಿಕೆಪಿಎಸ್ ಸೊಸಾಯಿಟಿಗೆ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು ಇದೇ ದಿ. ೨೯ ರಂದು ಮತದಾನ ಇರುತ್ತದೆ. ಆಡಳಿತ ಮಂಡಳಿಗಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು ದಿ. ೨೩ ರಂದು ಮಧ್ಯಾಹ್ನ ೩ ಗಂಟೆಯವರೆಗೆ ಸಮಯವಿತ್ತು  ಆದರೆ ಸಹಕಾರಿ ಚುನಾವಣಾಧಿಕಾರಿಗಳು ಸಾಯಂಕಾಲ ೫.೩೦ ರವರೆಗೂ ನಾಮಪತ್ರ ಹಿಂತೆಗೆದುಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಚುನಾವಣಾ ಅಧಿಕಾರಿಯಾಗಿದ್ದ ಎ ಆರ್ ಕರಿಗಾರ ಅವರು ಈ ವಿಷಯದಲ್ಲಿ ಕರ್ತವ್ಯಲೋಪ ಮಾಡಿದ್ದಾರೆ ಅಲ್ಲದೆ ಚುನಾವಣಾ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಆದ್ದರಿಂದ ಸಹಕಾರ ಸಂಘಗಳ ನಿಬಂಧಕರು, ಉಪ ನಿಬಂಧಕರು ಕರಿಗಾರ ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಹೊಳೆಪ್ಪ ಶಿವಾಪೂರ ಆಗ್ರಹಿಸಿದ್ದಾರೆ.

RELATED ARTICLES

Most Popular

close
error: Content is protected !!
Join WhatsApp Group