Homeಸುದ್ದಿಗಳುಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಶಾಸಕರ ಸೂಚನೆ

ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಶಾಸಕರ ಸೂಚನೆ

ಸಿಂದಗಿ: ಮುಂಬರುವ ದಿನಗಳಲ್ಲಿ ಸಿಂದಗಿ ಮತಕ್ಷೇತ್ರ ಕುಡಿಯುವ ನೀರಿನ ಅಭಾವ ಆಗದಂತೆ ಜಾಗೃತೆ ವಹಿಸಿ ತುರ್ತು ಕ್ರಮ ವಹಿಸುವಂತೆ ಪ್ರತಿ ಶುಕ್ರವಾರ ಕುಡಿಯುವ ನೀರಿನ ಕುರಿತು. ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಸಿಂದಗಿ ಮತ್ತು ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ಇವರು ಕುಡಿಯುವ ನೀರಿನ ಸಲುವಾಗಿ ಸಭೆ ಮಾಡಿ ಮಾಹಿತಿ ಸಲ್ಲಿಸಲು ಶಾಸಕ ಅಶೋಕ ಎಂ ಮನಗೂಳಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಗುತ್ತಿರುವ ಬಗ್ಗೆ ತೀವ್ರ ನಿಗಾವಹಿಸಿ ವರದಿ ಸಲ್ಲಿಸಬೇಕು ತಾಲೂಕಿನ ಅದಿಕಾರಿಗಳು ಮೇಲಾಧಿಕಾರಿಗಳ ಮೂಲಕ ಚರ್ಚಿಸಿ ಕೂಡಲೇ ಕ್ರಮ ಜರುಗಿಸಬೇಕು ಎಂದು ಹೇಳಿದರು. 

ಮೊದಲಿಗೆ ಹಂದಿಗನೂರು ಗ್ರಾಮದಲ್ಲಿನ ಕೆರೆಗೆ ನೀರು ಹರಿಸುವ ಕುರಿತು. ಚರ್ಚೆ ಮಾಡಲಾಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ಉಪವಿಭಾಗ ಸಿಂದಗಿ. ಇವರು ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ಗಣಿಹಾರ, ಬೆನಕೋಟಗಿ ಎಲ್‍ಟಿ, ಕೊಕಟನೂರ, ಬಂದಾಳ, ಯಂಕಂಚಿ, ಗೋಲಗೇರಿ ಹಂದಿಗನೂರು ತಾಂಡಾ. ಬೋರಗಿ ಗ್ರಾಮಗಳಲ್ಲಿ ಮುಂದಿನ ಜನವರಿ ಫೆಬ್ರವರಿ ಮಾಹೆಯಲ್ಲಿ ಕುಡಿಯುವ ನೀರು ತೊಂದರೆ ಯಾಗುವ ಸಂಭವಿಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪವಿಭಾಗ ಸಿಂದಗಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಸಿಂದಗಿ ಇವರು ತಿಳಿಸಿದರು. 

ಮುಂದುವರೆದು ಶಾಸಕರು ಮಾತನಾಡಿ, ಜೆ,ಜೆ, ಎಂ ಜಲ ಜೀವನ ಮಿಷನ್ ತಾಲೂಕಿನಾದ್ಯಂತ ಕೆಲಸ ಪ್ರಗತಿಯಲ್ಲಿ ಇದೆ . ಕೆನಾಲ್ ಮುಖಾಂತರ ಪುರದಾಳ ಹಾಗೂ ಯಂಕಂಚಿ ಕೆರೆ ತುಂಬಿಸಲು ತಿಳಿಸಿದ ಅವರು, ಕುಡಿಯುವ ನೀರಿನ ಯೋಜನೆಗಳನ್ನು ಸರಿಯಾದ ನಿಟ್ಟಿನಲ್ಲಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಸಿಂದಗಿ ಕೆರೆ ಕುರಿತು ಪ್ರತಿ ದಿನ ಎಷ್ಟು ನೀರು ಸರಬರಾಜು ಆಗುತ್ತಿದೆ ಹಾಗೂ ಬಳಗಾನೂರ ಕೆರೆಯಿಂದ ಮತ್ತು ಯರಗಲ್ ನಿಂದ ಎಷ್ಟು ನೀರು ಕೆರೆಗೆ ಬರುತ್ತಿದೆ. ಸಿಂದಗಿ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ವಿವರಣೆ ಕೇಳಿ  ಪ್ರತಿ ಮೂರು ದಿನಕ್ಕೆ ನೀರು ಎಲ್ಲಾ ವಾರ್ಡ ಗಳಿಗೆ ನೀರು ಹರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠರವರಿಗೆ ಸೂಚಿಸಿದರು. 

ನಂತರ ಜಾನುವಾರುಗಳಿಗೆ ಮೇವು ತೊಂದರೆ ಆಗದಂತೆ ರೈತರಿಗೆ ಮೇವಿನ ಬೀಜ ವಿತರಿಸಲು ತಾಲೂಕಾ ಪಶು ವೈದ್ಯಾಧಿಕಾರಿ ರಾಮು ರಾಠೋಡ ರವರಿಗೆ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಗ್ನಿ, ಪಶು ಸಂಗೋಪನಾಧಿಕಾರಿ ರಾಮು ರಾಠೋಡ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

RELATED ARTICLES

Most Popular

error: Content is protected !!
Join WhatsApp Group