- Advertisement -
ಸವದತ್ತಿ – ತಾಲೂಕಿನಾದ್ಯಂತ ಕೋವಿಡ್ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಗ್ರಾಮಗಳಲ್ಲಿನ ಮತ್ತು ಸ್ಥಳೀಯ ರೈತರಿಗೆ ಬಿತ್ತನೆ ಕೆಲಸಕ್ಕೆ ತೊಂದರೆಯಾಗುತ್ತಿದೆ. ರೈತರು ಬೀಜ ಗೊಬ್ಬರ 10 ಗಂಟೆ ಒಳಗಾಗಿ ಬಂದು ಖರೀದಿಸಲು ತೊಂದರೆಯಾಗುತ್ತಿದೆ.
ಆದ್ದರಿಂದ ಬೆಳಗಾವಿ ನಗರದಲ್ಲಿ ಮಾಡಿರುವಂತೆ ನಮ್ಮಲ್ಲಿಯೂ ಬೆಳೆಗ್ಗೆ 6 ರಿಂದ 12 ಗಂಟೆಯವರೆಗೆ ರೈತರಿಗೆ ಪಟ್ಟಣಕ್ಕೆ ಬಂದು ಕೃಷಿ ಸಾಮಗ್ರಿಗಳನ್ನು ಖರೀದಿಸಲು ಸಮಯವನ್ನು ಹೆಚ್ಚಿಸಬೇಕು.
ಅದೇ ರೀತಿ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ಮುಂಜಾನೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಸವದತ್ತಿ ಘಟಕದವರು ಗ್ರೇಡ್ – 2 ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೊಳ ರವರಿಗೆ ಮನವಿ ಸಲ್ಲಿಸಿದರು.
- Advertisement -
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶಂಕ್ರೆಪ್ಪ ತೊರಗಲ್ಲ.ಶ್ರೀಕಾಂತ ಹಟ್ಟಿಹೊಳಿ.ನಿಂಗಪ್ಪ ತಪ್ಪಲದ.ಶಿದ್ದಪ್ಪ ಶಿದ್ದಾಪುರ ಉಪಸ್ಥಿತರಿದ್ದರು