- Advertisement -
ನಿಪ್ಪಾಣಿ – ಇಂದು ಕರ್ನಾಟಕ ರಕ್ಷಣಾ ವೇದಿಕೆ ಸದಲಗಾ ಘಟಕದ ವತಿಯಿಂದ ಪಟ್ಟಣದ ಅತ್ಯಾಧುನಿಕ ಬಸ್ ನಿಲ್ದಾಣದ ಆವರಣದಲ್ಲಿ ಆಗಬೇಕಿರುವ ಸಿ.ಸಿ ರಸ್ತೆ ಕಾಮಗಾರಿ ಪೂರ್ಣ ಮಾಡುವ ಕುರಿತು ಹಾಗೂ ಪಟ್ಟಣದ ಅಗ್ನಿಶಾಮಕದಳಕ್ಕೆ ಹೊಸ ವಾಹನಗಳನ್ನು ನೀಡುವ ಕುರಿತು ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶಾಸಕರಾದ ಗಣೇಶ ಹುಕ್ಕೇರಿ, ಸಾರಿಗೆ ಆಯುಕ್ತರಾದ ಡಿ.ಸಿ ಶಶಿಧರ, ಸದಲಗಾ ಪೋಲಿಸ್ ಠಾಣೆ ಉಪ ನಿರೀಕ್ಷಕರಾದ ಕುಮಾರ ಹಿತ್ತಲಮನಿ, ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕರವೇ ತಾಲೂಕಾಧ್ಯಕ್ಷರಾದ ನಾಗೇಶ್ ಮಾಳಿ, ಸದಲಗಾ ಕರವೇ ಅಧ್ಯಕ್ಷರಾದ ಸಂಜು ಲಠ್ಠೆ, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಕಾಸ ನಿಡಗುಂದೆ, ಕರವೇ ಮುಖಂಡರು ಅಭಿ ನಾಂದ್ರೆ, ವೈಭವ ಹಣಬರ ಉಪಸ್ಥಿತರಿದ್ದರು.