ಸಿಂದಗಿ: ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಮಿಸಲಾತಿ ಕಲ್ಪಿಸಿಕೊಟ್ಟು ಕೇಂದ್ರಕ್ಕೆ ಶಿಫಾರಸು ಮಾಡಿದನ್ನು ಪ್ರಧಾನಿ ಇಂದಿರಾಗಾಂಧಿ ಅವರು ಗೆಜೆಟ್ ಪಾಸ ಮಾಡಿ ಬಂಜಾರ ಸಮುದಾಯ ವನ್ನು ಮೇಲೆತ್ತಿದ್ದಾರೆ ಆದರೆ ಅವರು ಮಾಡಿದ ಎಲ್ಲ ಯೋಜನೆಗೆ ತಣ್ಣೀರು ಎರಚಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಪ್ರಕಾಶ ರಾಠೋಡ ಆರೋಪಿದರು.
ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ 2013ರಿಂದ 2018ರ ವರೆಗೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಸಂತಸೇವಾಲಾಲ ಜನ್ಮಸ್ಥಳ ಸೋರನಕೊಪ್ಪ ಜೀಣೋದ್ದಾರಕ್ಕೆ ರೂ.200 ಕೋಟಿ ಮೀಸಲಿಟ್ಟಿದ್ದರು ನಂತರದಲ್ಲಿ ಬಂದ ಬಿಜೆಪಿ ಸರಕಾರ ಹಣ ನೀಡುತ್ತಿಲ್ಲ. 15 ಲಕ್ಷ ಮನೆಗಳನ್ನು ಹಣ ಮಂಜೂರು ಮಾಡಿದೆ. ಮನೆ ಕಟ್ಟಿಕೊಂಡವರಿಗೆ ಬಿಲ್ಲು ಹಾಕುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಪ್ರತಿಯೊಂದನ್ನು ಕೇಳಿದರೆ ಸರಕಾರದಲ್ಲಿ ದುಡ್ಡಿಲ್ಲ ಅನ್ನುವದೊಂದೇ ಉತ್ತರ ನೀಡುತ್ತಿದ್ದಾರೆ. ಪ್ರತಿ ಕುಟುಂಬದ ಸದಸ್ಯನಿಗೆ 7 ಕೆ.ಜಿ. ಅಕ್ಕಿ ನೀಡುತ್ತಿರುವುದನ್ನು 5 ಕೆ.ಜಿ. ಅಕ್ಕಿ ನೀಡಿ ಅನ್ಯಾಯ ಮಾಡುತ್ತಿದೆ. ಡಾ ಅಂಬೇಡ್ಕರರ ಸಂವಿಧಾನದ ಆಧಾರದ ಮೇಲೆ 165 ಯೋಜನೆಗಳನ್ನು ನೀಡಿದೆ ಅದರಲ್ಲಿ ಕೆಲವೊಂದು ಯೋಜನೆಗಳನ್ನು ನಿಲ್ಲಿಸಿಬಿಟ್ಟಿದೆ. ರೈತರಿಗೆ, ಕೂಲಿಕಾರ್ಮಿಕರಿಗೆ ಯಾವುದೇ ಪರಿಹಾರ ಕಲ್ಪಿಸಿಕೊಟ್ಟಿಲ್ಲ ಬರೀ ಆಶ್ವಾಸನೆಯಲ್ಲಿ ಕಾಲಹರಣ ಮಾಡುತ್ತಿದೆ. ಜನಸಾಮಾನ್ಯರಿಗೆ ದಿನಬಳಕೆ ವಸ್ತುಗಳು, ಡೀಜೆಲ್, ಪೆಟ್ರೋಲ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿಸಿ ಜನರನ್ನು ತೊಂದರೆಯಲ್ಲಿ ಸಿಲುಕಿಸಿದೆ ಇದನ್ನು ಅರಿತ ಜನರು ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ ಮಾತನಾಡಿ, ಈ ಕ್ಷೇತ್ರದ 16 ತಾಂಡಾಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇವೆ ಅಲ್ಲದೆ ಕಳೆದ ಕಾಂಗ್ರೆಸ್ ಸರಕಾರದಲ್ಲಿ ಎಲ್ಲ ಸೌಲಭ್ಯಗಳನ್ನು ನೀಡುವ ಮೂಲಕ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಪ್ರಧಾನಿ ಇಂದಿರಾಗಾಂಧಿಯವರು ಉಳುವವನೆ ಭೂಮಿ ಒಡೆಯ ಎನ್ನುವ ಕಾನೂನು ಜಾರಿ ಮಾಡಿದರೆ ಸಿದ್ದರಾಮಯ್ಯನವರು ವಾಸಿಸುವನೇ ನೆಲದೊಡೆಯ ಎನ್ನುವ ಜಾರಿಗೆ ತಂದು ಎಲ್ಲ ದಲಿತ ಸಮುದಾಯಗಳನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಆದೇಶ ನೀಡಿದೆ ಆದರೆ ಬಿಜೆಪಿ ಸರಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ ಬರೀ ಸುಳ್ಳಿನ ಸರಕಾರವಾಗಿದೆ ಇದನ್ನು ಯಾರು ನಂಬುವುದಿಲ್ಲ ಮುಂದಿನ 2023ರ ಸಾರ್ವತ್ರಿಕ ಚುನಾವಣೆಗೆ ಈ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಮೂಲಕ ಎಚ್ಚರಿಕೆ ಗಂಟೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಜಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೀಮಾ ನಾಯಕ ಮಾತನಾಡಿ, ಕಳೆದ ಸಿದ್ದರಾಮಯ್ಯನವರ ಸರಕಾರದಲ್ಲಿ ಬಂಜಾರ ಅಭಿವೃದ್ಧಿ ನಿಗಮಕ್ಕೆ ರೂ. 175 ಕೋಟಿ ಮೀಸಲಿಟ್ಟಿದ್ದರು ಆದರೆ ಈ ಬಿಜೆಪಿ ಸರಕಾರದಲ್ಲಿ ಒಂದು ನಯಾಪೈಸೆ ಕೊಟ್ಟಿಲ್ಲ. ಇಂತಹ ಭ್ರಷ್ಟ ಸರಕಾರವನ್ನು ತೊಲಗಿಸಬೇಕು ಎಂದು ಪಣತೊಟ್ಟಿದ್ದಾರೆ ಕಳೆದ ಅವಧಿಯಲ್ಲಿ ಈ ಜಿಲ್ಲೆಯ ಎಲ್ಲ ತಾಂಡಾಗಳಲ್ಲಿ ಸೇವಾಲಾಲ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಲಾಗಿದೆ ಮುಂದೆ ಬಂದ ಸರಕಾರ ಯಾವುದೇ ಅಭಿವೃದ್ಧಿ ಪರ ಚಿಂತನೆ ನಡೆಸದೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ ಅವರು ಈ ಜನಾಂಗಕ್ಕೆ ಅವಹೇಳನಕಾರಿ ಮಾತನಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಕಾಂತಾ ನಾಯಕ, ಎಂ.ಎಸ್.ನಾಯಕ, ಅಶೋಕ ರಾಠೋಡ, ಮಾದೇವ ರಾಠೋಡ, ಸೋಮು ರಾಠೋಡ, ರಾಮಚಂದ್ರ ರಾಠೋಡ, ನರಸು ಚವ್ಹಾಣ, ರಾಜು ಜಾಧವ, ಬದ್ದು ನಾಯಕ ಸೇರಿದಂತೆ ಅನೇಕರಿದ್ದರು.