- Advertisement -
ಬೆಳಗಾವಿ – ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಬೆಳಗಾವಿಯ ನಿರ್ದೇಶಕರೂ ಹಾಗೂ ಲೇಕ್ ವ್ಯೂ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ|| ಶಶಿಕಾಂತ ವಾಯ್. ಕುಲಗೋಡರವರು ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿಗಳಿಗೆ ವಿತರಿಸಲು ಐದು ಸಾವಿರ ಮಾಸ್ಕ್ ಗಳನ್ನು
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಎ ಬಿ ಪುಂಡಲೀಕರವರಿಗೆ ಹಸ್ತಾಂತರಿಸಿದರು. ಡಿ
ವಾಯ್ ಪಿ ಸಿ ಬಸವರಾಜ ಮಿಲ್ಲಾನಟ್ಟಿಯವರು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ “ಆರೋಗ್ಯ ವರ್ಧಕ ಶಾಲೆ”ಯ ಪರಿಕಲ್ಪನೆಯಡಿಯಲ್ಲಿ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಮೂಲಕ ಕಾರ್ಯಗೈಯುತ್ತಿರುವ ಮಾನ್ಯರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಎ ಬಿ. ಪುಂಡಲೀಕ ರವರು ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.