spot_img
spot_img

ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ ಗುರು – ಪ್ತೊ.ಬೀಳಗಿ

Must Read

- Advertisement -

ಸಿಂದಗಿ: ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ ಎಂದರೆ ಗುರು. ಗುರುವಿನಿಂದಲೆ ಮೋಕ್ಷ ಗುರುವಿನಿಂದಲೆ ಸಾಧನೆ ಒಬ್ಬ ಒಳ್ಳೆ ಗುರು ದೊರೆತರೆ ಬಾಳಿಗೊಂದು ಊರುಗೊಲು ಸಿಕ್ಕಂತೆ ಎಂದು ಪ್ರೊ. ಎಸ್ ವಾಯ್ ಬೀಳಗಿ ಹೇಳಿದರು.

ಪಟ್ಟಣದ ಪಿಇಎಸ್ ಸಂಸ್ಥೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದು ನೂತನವಾಗಿ ಪ್ರಾರಂಭಿಸಲಾದ ಶ್ರೀಮತಿ ಪ್ರೇಮಾ ಭೀ ಕರ್ಜಗಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಗುರುಪೂರ್ಣಿಮಾ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ ಪಿ ಕರ್ಜಗಿಯವರು ಮಾತನಾಡಿ, ಗುರುವಿನ ಮೌಲ್ಯ ಹಾಗೂ ಗುರುವಿನ ಮಹತ್ವದ ಕುರಿತು ತಿಳಿಸಿದರು.

- Advertisement -

ಸಂಸ್ಥೆಯ ಆಡಳಿತಾಧಿಕಾರಿ, ಆಯ್ ಬಿ ಬಿರಾದಾರ ಮಾರ್ಗದರ್ಶಕ ಕೆ.ಹೆಚ್. ಸೋಮಾಪೂರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಕಡಣಿ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಆರ್ ಬಿ ಗೋಡಕರ ಉಪನ್ಯಾಸಕರಾದ ಹೆಚ್ ಎಸ್ ಬಿರಾದಾರ , ವಿ ವಿ ಪಾಟೀಲ ಮತ್ತು ಬೋಧಕೇತರ ಸಿಬ್ಬಂದಿಗಳಾದ ಎಮ್ ಸಿ ಹೊಸಮನಿ, ಜಿ.ಎಮ್.ಮಿರಗಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group