ಕತ್ತುಕೊಯ್ದು ವ್ಯಕ್ತಿಯ ಬರ್ಬರ ಕೊಲೆ

Must Read

ಬೀದರ್ – ವ್ಯಕ್ತಿಯೊಬ್ಬನನ್ನು ಕೈಕಾಲು ಕಟ್ಟಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಗರದ ಹಳೆ ಸಪ್ನಾ ಥಿಯೇಟರ್ ಬಳಿ ನಡೆದಿದೆ.

ಸ್ಥಳಕ್ಕೆ ಗಾಂಧಿ ಗಂಜ್ ಠಾಣೆಯ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಅಜ್ಜು ( 34 ) ಎಂದು ಗುರುತಿಸಲಾಗಿದ್ದು ಬೀದರ್ ನ ಮುಲ್ತಾನಿ ಕಾಲೋನಿಯ ವ್ಯಕ್ತಿ. ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿ‌ ಎಂದು ಹೇಳಲಾಗುತ್ತಿದೆ.

ಈತನ ಕೈಕಾಲು ಕಟ್ಟಿ ಹಾಕಿ ಕೊಲೆ ಮಾಡಿದ ದೃಶ್ಯ ಬೀದರ್ ಜನರಲ್ಲಿ ನಡುಕ ಹುಟ್ಟಿಸಿದೆ. ಆರೋಪಿಗಳ ನಿಖರವಾದ ಮಾಹಿತಿ ಇನ್ನು ನಿಗೂಢ ವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಅಜ್ಜುವನ್ನು ಬೇರೆ ಕಡೆ ಕೊಲೆ ಮಾಡಿ ಬೀದರ್ ನ ಹಳೆಯ ಸ್ವಪ್ನ ಚಿತ್ರ ಮಂದಿರದ ಬಳಿಯ ಖಾಲಿ ಜಾಗದಲ್ಲಿ ಮೃತದೇಹವನ್ನು ಬಿಸಾಕಿ ಪರಾರಿಯಾಗಿದ್ದಾರೆ.

ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿ. ಡಿ ಎಲ್ ನಾಗೇಶ್ ಮತ್ತು ಡಿವೈಎಸ್ ಪಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ

Latest News

ಜೀವನಾನುಭವಗಳು ವ್ಯಕ್ತಿಯ ಶಕ್ತಿ — ಗೊರೂರು ಶಿವೇಶ

ಜೀವನಾನುಭವಗಳು ವ್ಯಕ್ತಿಯ ಶಕ್ತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯ ಪಟ್ಟರು‌. ಅವರು ನಗರದ ಟಾರ್ಗೆಟ್ ಪಿಯು ಕಾಲೇಜಿನಲ್ಲಿ ಕದಂಬ ಸೇನೆ ಆಯೋಜಿಸಿದ ಪದಗ್ರಹಣ, ನಿವೃತ್ತ...

More Articles Like This

error: Content is protected !!
Join WhatsApp Group