spot_img
spot_img

ಕೃಷಿ ಅಧಿಕಾರಿಯನ್ನೇ ಕಟ್ಟಿ ಹಾಕಿದ ರೈತರು

Must Read

spot_img
- Advertisement -

ಬೀದರ – ಸಕಾಲಕ್ಕೆ ಸೊಯಾಬೀನ್ ಬೀಜ ಸಿಗಲಾರದಕ್ಕೆ ಕೋಪಗೊಂಡು ರೈತರು ಪ್ರತಿಭಟನಾರ್ಥವಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನೇ ಕಟ್ಟಿಹಾಕಿದ ಘಟನೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಔರಾದ್ ನಲ್ಲಿ ನಡೆದಿದೆ.

ಸೋಯಾಬಿನ್ ಬೀಜ ಸಿಗದ್ದಕ್ಕೆ ರೈತರ ಆಕ್ರೋಶ ವ್ಯಕ್ತಪಡಿಸಿದ್ದು ಕೇಳಿದಾಗೊಮ್ಮೆ ಈಗ ಬರುತ್ತದೆ, ಆಗ ಬರುತ್ತದೆ ಎಂಬ ನೆಪ ಹೇಳುತ್ತಿದ್ದ ಅಧಿಕಾರಿ ಭೀಮರಾವ್ ಶಿಂಧೆಯವರನ್ನು ಗೇಟಿಗೆ ಕಟ್ಟಿಹಾಕಿದರು.

ಮಳೆಗಾಲ ಆರಂಭವಾಗಿದೆ. ಬಿತ್ತನೆ ಕಾರ್ಯ ಎಲ್ಲಾ ಕಡೆ ಭರದಿಂದ ಸಾಗಿದ್ದು ಈ ಭಾಗದ ರೈತರಿಗೆ ಸೊಯಾಬೀನ್ ಬಿತ್ತನೆ ಬೀಜವನ್ನು ಸಕಾಲದಲ್ಲಿ ಪೂರೈಸುವುದು ಅಗತ್ಯವಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದಾಗಿ ಬೀಜ ಪೂರೈಕೆಯಾಗದೆ ರೈತರು ಪ್ರತಿಭಟನೆಯ ದಾರಿ ಹಿಡಿಯಬೇಕಾಗಿದೆ.

- Advertisement -

ಇನ್ನಾದರೂ ಇಂಥ ಘಟನೆಗಳು ಜರುಗದಂತೆ ಕೃಷಿ ಇಲಾಖೆ ಮುಂದಾಗಿ ರೈತರಿಗೆ ಬೀಜ, ಗೊಬ್ಬರಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group