ಸಿಂದಗಿ: ಸಾಹಿತ್ಯ ಪರಿಷತ್ತು ಬರೀ ಹಾಸೀಂಪೀರ ವಾಲಿಕಾರ ಹಾಗೂ ಕೆಲ ತಾಲೂಕು ಅಧ್ಯಕ್ಷರ ಸ್ವತ್ತಲ್ಲ ಅದು ಎಲ್ಲ ಕನ್ನಡಿಗರ ಸ್ವತ್ತು ಅದು ಎಲ್ಲರ ಮನೆಗಂಳದಲ್ಲಿ ಎಲ್ಲ ಮನದಲ್ಲಿ ಪ್ರಜ್ವಲಿಸಬೇಕು ಅಂತೆಯೇ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ. ಕಾರಣ ಜಿಲ್ಲೆಯ ಮಹಿಳಾ ಸಾಹಿತಿಗಳನ್ನು ಹೊರ ತರುವ ನಿಟ್ಟಿನಲ್ಲಿ ಇದೇ 30 ಮತ್ತು 31 ರಂದು ವಿಜಯಪುರದ ಕಂದಕಲ್ ಹಣಮಂತ್ರಾಯ ರಂಗ ಮಂದಿರದಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಈ ತಾಲೂಕಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಅಧ್ಯಕ್ಷರ ಕಾರ್ಯ ಬಾಹುಳ್ಯದಲ್ಲಿ ಕಳೆದ 2 ವರ್ಷಗಳಿಂದ ಸಿಂದಗಿಯಲ್ಲಿ ಸಾಹಿತ್ಯ ಚಟುವಟಿಕೆಗಳು ನಿಂತು ಹೋಗಿದ್ದವು ಅವುಗಳು ಚುರುಕುಗೊಳಿಸಲು ನೂತನ ಅದ್ಯಕ್ಷ ಶಿವಾನಂದ ಬಡಾನೂರ ಅವರನ್ನು ನೇಮಕ ಮಾಡಲಾಗಿದೆ. ಜ. 10ರ ಒಳಗಾಗಿ ಸಿಂದಗಿ ತಾಲೂಕು ಸಮ್ಮೇಳನ ಹಮ್ಮಿಕೊಳ್ಳುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದ ಅವರು ಸಿಂದಗಿ-ಇಂಡಿ ಬಾಗದಲ್ಲಿ ಮಹಿಳಾ ಜನಪದ ಸಾಹಿತಿಗಳು, ಸಾಂಸ್ಕೃತಿಕ ಕಲಾವಿದರು, ಕವಯತ್ರಿ ಯರು ಹೆಚ್ಚಿನ ಪ್ರಮಾಣದಲ್ಲಿದ್ದು ಸಾಹಿತ್ಯ ಕೃಷಿ ಹೊಸಬರಲು ಅವರಿಗೆ ವೇದಿಕೆ ಕೊರತೆಯಿದೆ ಮುಂದಿನ ದಿನಮಾನಗಳಲ್ಲಿ ವೇದಿಕೆ ಕಲ್ಪಿಸಿಕೊಡುವ ಕೆಲಸ ಸಾಹಿತ್ಯ ಪರಿಷತ್ತು ಪ್ರಯತ್ನಿಸುತ್ತದೆ. ಈ ಜಿಲ್ಲಾ ಸಮ್ಮೇಳನದಲ್ಲಿ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಆಸಕ್ತರು ಹೆಸರುಗಳನ್ನು ಸೂಚಿಸಿದರೆ ಅವರಲ್ಲಿರುವ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಡಲಾಗುವುದು ಇದು ಮಹಿಳೆಯರ ಕಾರ್ಯಕ್ರಮವಾಗಿದ್ದು ಶಾಸಕರು, ಸಚಿವರನ್ನು ಹೊರತು ಪಡಿಸಿದರೆ ಎಲ್ಲರು ಮಹಿಳೆಯರೇ ವೇದಿಕೆ ಮೇಲಿರುತ್ತಾರೆ. ಜಿಲ್ಲೆಯ ಕಲಾವಿದರ ಕಲೆಗಳು ಅನಾವರಣಗೊಳ್ಳಲು ಅನುಕೂಲ ಮಾಡಿಕೊಡಿ ಸ್ಪರ್ಧೆ ಬೇಡ ಈ ಸಮ್ಮೇಳನದಲ್ಲಿ ಉಳಿದುಕೊಂಡ ಮಹಿಳೆಯರನ್ನು ಮತ್ತೊಂದು ವೇದಿಕೆಗೆ ಅಹ್ವಾನಿಸೋಣ ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಜಿಲ್ಲೆಯ ಮಹಿಳಾ ಸಾಹಿತಿಗಳ ಹೆಸರುಗಳನ್ನು ಗುರುತಿಸಿ ಆಯ್ಕೆ ಮಾಡಲಾಗುವುದು ಅದಕ್ಕೆ ಜಿಲ್ಲೆಯ ಎಲ್ಲ ಮಹಿಳಾ ಮಣಿಗಳ ಸಹಕಾರ ಮುಖ್ಯ ಅಲ್ಲದೆ ಹಿರಿಯ ಸಾಹಿತಿಗಳ ಅಭಿಪ್ರಾಯವು ಕೂಡಾ ಮುಖ್ಯವಾಗಿದೆ ಕಾರಣ ಈ ಸಮ್ಮೇಳನವು ಅರ್ಥಪೂರ್ಣ ಹಾಗೂ ರಾಜ್ಯಕ್ಕೆ ಮಾದರಿಯಾಗುವ ಹಾಗೆ ಮಾಡೋಣ ಎಂದರು.
ಶಿಕ್ಷಕಿ ಶೋಬಾ ಚಿಗರಿ ಮಾತನಾಡಿ, ಇದು ಮಹಿಳೆಯರ ಕಾರ್ಯಕ್ರಮವಿದ್ದು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕಾರ್ಯಕ್ರಮ ಜರುಗಲು ಎಲ್ಲರು ತನು ಮನ ಧನದಿಂದ ಸಹಕಾರ ನೀಡಿದ್ದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯ ತಾಲೂಕಿನಿಂದ ಮಹಿಳೆಯರನ್ನು ಕರೆತರುವ ಕಾರ್ಯ ಮಾಡುವದಾಗಿ ಹೇಳಿ ವೈಯಕ್ತಿಕವಾಗಿ ರೂ 10 ಸಾವಿರ ನೀಡುವ ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಶೈನಾಬಿ ಮಸಳಿ, ಮಹಾನಂದ ಬಮ್ಮಣ್ಣಿ ಮಾತನಾಡಿದರು.
ಗೋಲ್ಲಾಳಪ್ಪಗೌಡ ಪಾಟೀಲ ಗೊಲಗೇರಿ, ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ತಾಲೂಕಾಧ್ಯಕ್ಷ ಶಿವು ಬಡಾನೂರ, ಚಂದ್ರಶೇಖರ ನಾಗರಬೇಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ, ಸಂಗನಗೌಡ ಪಾಟೀಲ ಅಗಸಬಾಳ, ಸುನಂದಾ ಯಂಪೂರೆ, ಎಸ್.ಬಿ.ಚೌದರಿ, ವರ್ಷಾ ಪಾಟೀಲ,ಜಯಶ್ರೀ ಹದನೂರ, ಶಶಿಕಲಾ ಅಂಗಡಿ, ಬಸಮ್ಮಾ ನಾಗರಳ್ಳಿ, ನೀಲಾಂಬಿಕೆ ಶಿವಶಿಂಪಿ, ನೀಲಮ್ಮ ಬಡಿಗೇರ, ಸವಿತಾ ಕಲಬುರ್ಗಿ, ರೂಪಾ ಗಿರಣಿ ಸೇರಿದಂತೆ ಅನೇಕರಿದ್ದರು.