- Advertisement -
ಬೀದರ – ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖದೀಮನೊಬ್ಬನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಎಂಟು ದಿನಗಳ ಹಿಂದೆ ಸರ ಕಳ್ಳತನ ಮಾಡಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ನ್ಯೂ ಟೌನ್ ಪೊಲೀಸರು ಆತನಿಂದ ೬೦ ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ ಬೀದರ್ ಜೈಲಿಗೆ ಕಳುಹಿಸಿದ್ದಾರೆ.
ಪೊಲೀಸ್ ಅಧೀಕ್ಷಕ ನಾಗೇಶ್ ಡಿ ಎಲ್, ಉಪ ಅಧೀಕ್ಷಕ ಕೆ ಎಮ್ ಸತೀಶ ಅವರ ಮಾರ್ಗದರ್ಶನದಲ್ಲಿ ಠಾಣೆಯ ನೂತನ ವೃತ್ತ ನಿರೀಕ್ಷಕರಾದ ಕಪಿಲ್ ದೇವ, ಪಿಎಸ್ ಐ ತಿಮ್ಮಯ್ಯ, ಪ್ರೊಬೇಷನರಿ ಪಿಎಸ್ ಐ ನಾಗೇಂದ್ರ, ಎಎಸ್ಐ ವಿಶ್ವನಾಥ ಹಾಗೂ ಸಿಬ್ಬಂದಿಗಳಾದ ಮೋಹನರಾಜ್, ಪ್ರಕಾಶ, ಶಿವಾನಂದ, ಜಯರಾಜ್, ವಿಜಯಕುಮಾರ, ಶೇಖ ಮೋದಿನ್, ಸುನೀಲ್ ರಾಠೋಡ ಹಾಗೂ ರಾಹುಲ್ ಇವರೆಲ್ಲ ಈ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.
- Advertisement -
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ