ವಿಪರೀತ ಸಾಲ ಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ವಿಪರೀತ ಸಾಲದ ಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ಹಾವಪ್ಪಾ ತಂದೆ ಅಡೆಪ್ಪ ಮುದ್ದೆಪ್ಪನೋರ ( 60) ಎಂಬಾತ ಮೃತ ರೈತ ದುರ್ದೈವಿ.

ಈತನು ಕಳೆದ ಕೆಲ ವರ್ಷದಿಂದ ಹೊಲದ ಬೆಳೆ ಸಲವಾಗಿ ಅನೇಕ ಕಡೆ ಖಾಸಗಿ ಸಾಲವನ್ನು ಪಡೆದಿದ್ದರು.

ಹೊಲದ ಮೇಲೆ ಎರಡು ವರ್ಷದ ಹಿಂದೆ PKPS ಬ್ಯಾಂಕದಲ್ಲಿ 1,00,000 ( ಒಂದು ಲಕ್ಷ ರೂಪಾಯಿ ) ಬೆಳೆ ಸಾಲ ತೆಗೆದುಕೊಂಡಿದ್ದರು.

ಎರಡು ವರ್ಷದಿಂದ ಹೊಲದಲ್ಲಿ ಹಾಕಿದ ಬೆಳೆಯು ಮಳೆ ಹೋಗಿ ಮತ್ತು ಮಳೆ ಹೆಚ್ಚಾಗಿ ಬೆಳೆ ಬಂದಿರಲಿಲ್ಲ. ಅಲ್ಲದೆ ಈ ಹೊಲದಲ್ಲಿ ಗೊಬ್ಬರ ಸಲುವಾಗಿ ಖಾಸಗಿ ಸಾಲ 3 ಲಕ್ಷ ರೂಪಾಯಿ ಕೂಡಾ ತಂದಿರುತ್ತಾರೆ.ಸಾಲದ ಚಿಂತೆಯಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಹೊಲದಲ್ಲಿದ್ದ ಮಾವಿನ ಗಿಡಕ್ಕೆ ನೇಣು ಹಾಕಿಕೊಂಡಿದ್ದಾರೆ.

ಇವರು ಒಬ್ಬಳು ಹೆಣ್ಣು ಮಗಳು ಎರಡು ಗಂಡು ಮಕ್ಕಳು ಹೊಂದಿರುವ ರೈತ.ಈ ಸಂಬಂಧ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು , ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ವೈದ್ಯರಿಂದ ಶವಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group