ಮುನವಳ್ಳಿಃ ಪಟ್ಟಣದ ಸುಪ್ರಸಿದ್ಧ ಧಾರ್ಮಿಕ ಕೇಂದ್ರ ಸೋಮಶೇಖರ ಮಠದಲ್ಲಿ ನವ್ಹೆಂಬರ್ ೭ ಮಂಗಳವಾರ ಸಂಜೆ ೬ ಗಂಟೆಗೆ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮುನವಳ್ಳಿಯ ಅಕ್ಕನ ಬಳಗ ಹಾಗೂ ಅನ್ನದಾನೇಶ್ವರ ಮಹಿಳಾ ಬಳಗ ಮತ್ತು ಸಹಜ ಸ್ಥಿತಿ ಯೋಗ ಸತ್ಸಂಗ ಬಳಗ ಶ್ರೀ ಮಠದ ಶಿಕ್ಷಣ ಸಂಸ್ಥೆಗಳ ಎಲ್ಲ ಗುರುವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ನಂತರ ಭಜನೆ ಪೂಜ್ಯರಿಂದ ಆಶೀರ್ವಚನ ಜರುಗುವ ಮೂಲಕ ಕಾರ್ತಿಕೋತ್ಸವ ಜರುಗುವುದು ಎಂದು ಶ್ರೀ ಮಠದ ಸದ್ಬಕ್ತರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ತಿಳಿಸಿದ್ದಾರೆ.