ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಇಂದು ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಚುನಾವಣಾ ರಣತಂತ್ರ ಸಭೆ ನಡೆಯಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಸೋಲಿಸಲು ರಣತಂತ್ರ ಹೆಣೆಯಲು ಗುಪ್ತ ಸಭೆಯನ್ನು ಕೇಂದ್ರ ಅಚಿವ ಭಗವಂತ ಖೂಬಾ ನಡೆಸಿದ್ದು ಸಭೆಯ ಕೇಂದ್ರ ಬಿಂದು ಯಾರು ಇರಬಹುದು ಎಂಬುದು ಕುತೂಹಲ ಮೂಡಿಸಿದೆ.
ವಿಧಾನ ಪರಿಷತ್ ಚುನಾವಣೆ ರಣತಂತ್ರ ಸಭೆ ನಡೆದಿದ್ದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಪ್ತ ರಾಜ್ಯದ ಉಪ ನಾಯಕ ಎಂದು ಕರೆಯಲ್ಪಡುವ ಬಂಡೆಪ್ಪ ಖಾಶೆಂಪುರ ಮನೆಯಲ್ಲಿ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಪ್ರಾರಂಭವಾಗಿದೆ.
ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಉಪ ನಾಯಕ ಬಂಡೆಪ್ಪ ಖಾಶೆಂಪುರ ವರ್ಚಸ್ಸು ಜೋರಾಗಿಯೇ ಇದೆ. ಈ ಸಭೆಯು ಬಿಜೆಪಿ ಮತ್ತು ಜೆಡಿಸ್ ಒಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ರಣತಂತ್ರ ಹೆಣೆಯಲು ನಡೆಸಲಾಗಿದೆ ಎನ್ನಲಾಗಿದೆ.
ಬೀದರ್ ಗ್ರಾಮ ಪಂಚಾಯತ ಸದಸ್ಯರು ಹಣ ಬಲದ ಕಡೆನೋ ಅಥವಾ ಜನ ಬಲದ ಕಡೆನೋ ಕಾದು ನೊಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ