- Advertisement -
ಸಿಂದಗಿ – ಇಂದು ಪುರದಾಳ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಸದ್ಗುರು ಭೀಮಾಶಂಕರ ಮಠದ ಆವರಣದಲ್ಲಿ ಐವತ್ತು ವಿವಿಧ ತರಹದ ಗಿಡಗಳನ್ನು ಸಿಂದಗಿ ತಾಲ್ಲೂಕಿನ ಜನಪ್ರಿಯ ಮಾಜಿ ಶಾಸಕರಾದ ರಮೇಶ ಭೂಸನೂರ ಅವರ ನೇತೃತ್ವದಲ್ಲಿ ಹಚ್ಚಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ ಭೂಸನೂರ ಅವರು, ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ ಮತ್ತು ಇಂತಹ ದೇವಸ್ಥಾನದ ಮುಂದೆ ಗಿಡಗಳನ್ನು ಹಚ್ಚಬೇಕು ಗಿಡಗಳಿಂದ ನಮಗೆಲ್ಲ ಆಕ್ಸಿಜನ್, ತಂಪಾದ ಗಾಳಿ ಸಿಗುತ್ತದೆ ಇದರಿಂದ ಕರೋನ ಕಾಯಿಲೆಯು ಕೂಡಾ ನಿರ್ಮೂಲನೆ ಆಗುತ್ತದೆ ಸರಿಯಾದ ಸಮಯಕ್ಕೆ ಮಳೆ ಆಗುತ್ತದೆ ಒಂದು ರೀತಿ ನಮಗೆಲ್ಲ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಮೂಲಕ ಹಸಿರು ನಮ್ಮ ಉಸಿರು ಅನ್ನುವ ಹಾಗೆ ಈ ಪರಿಸರ ದಿನಾಚರಣೆಯನ್ನು ಆಚರಣೆ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ ಪಾಟೀಲ ಸಿದ್ದು ಬುಳ್ಳಾ ಗುರು ತಳವಾರ ನಿಂಗನಗೌಡ ಪಾಟೀಲ ರಾಜು ಮದರಕಾನಿ ಕೆಂಚಪ್ಪ ಮಾದರ ಬಸವರಾಜ ತಾಳಿಕೋಟಿ ಕುಮಾರ ಬೂಸನೂರ ಹಾಜರಿದ್ದರು.