spot_img
spot_img

ಸ್ವರ ಗೀತೆ ಅನ್ನದಾತ

Must Read

- Advertisement -

ಸ್ವರ ಗೀತೆ ಅನ್ನದಾತ

ಅ ನ್ನದಾತ ಜಗಕೆ ನೀನು ಭಾಗ್ಯದಾತ
ಆ ಳಾಗಿ ದುಡಿದು ಅನ್ನ ನಮಗೆ ನೀಡುವಾತ/

ಇ ಲ್ಲ ನಿನಗೆ ದುಡಿಮೆಯಿಂದ ವಿಶ್ರಾಂತಿ
ಈ ಗಲೂ ಜಗ ನಂಬಿದೆ ನಿನ್ನ ಹಸಿರು ಕ್ರಾಂತಿ/

ಉ ತ್ತಿ ಬಿತ್ತಿ ಬೆಳೆಯ ಕೊಡುವೆ ನೀ ನಮ್ಮಪ್ಪ
ಊ ಟ ಮಾಡುವಾಗ ನಾ ನಿನ್ನ ನೆನೆವೆನಪ್ಪ/

- Advertisement -

ಋ ಷಿಗಳಂತೆ ಸ್ವಾರ್ಥವಿರದ ಬದುಕು ನಿನ್ನದು
ಎ ಷ್ಟು ಕಷ್ಟ ಬಂದರೂ ಬಿತ್ತುದ ಬಿಡದು/

ಏ ನೇ ಕೊಟ್ಟರೂನು ನಿನ್ನ ಋಣವು ತೀರದಯ್ಯ
ಐಕ್ಯತೆಯ ನಿನ್ನ ನೋಡಿ ಕಲಿಯಬೇಕಯ್ಯ/

ಒಂದಾಗಿ ಮುಂದಾಗಿ ಸಾಗುತಿಹೆ ಜಗದಲಿ
ಓ ನೇಗಿಲಯೋಗಿ ನಮಿಪೆ ನಿನ್ನ ಮನದಲಿ/

- Advertisement -

ಔ ತಣದಾ ಕೂಟಗಳಲಿ ವ್ಯರ್ಥವಾಗೆ ಕೂಳು
ಅಂ ಧ ಪ್ರತಿಷ್ಠೆ ಕೂಪದಲ್ಲಿ ಮುಳುಗಿರೆ ಗೋಳು/

ಅಃ ಮಿಕೆಯಲಿ ಅಂತಃಕರಣ ಮಾಯವಾಯಿತೇ
ನನಗೆ ನೀನು ನಿನಗೆ ನಾನು ಎಂಬ ಭಾವ ಇಲ್ಲವಾಯಿತೇ/


ಶ್ರೀಮತಿ ಜ್ಯೋತಿ ಸಿ ಕೋಟಗಿ
ಶಿಕ್ಷಕಿ ಸ.ಮಾ.ಪ್ರಾ.ಶಾಲೆ ತಲ್ಲೂರ
ತಾ/ಸವದತ್ತಿ ಜಿ/ಬೆಳಗಾವಿ
9980801993

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group