spot_img
spot_img

ಭ್ರಷ್ಟಾಚಾರ ನಿಯಂತ್ರಿಸಲು ಬಿಜೆಪಿಗೆ ಮತ ನೀಡಿ – ಕಾರಜೋಳ

Must Read

- Advertisement -

ಸಿಂದಗಿ: ರೈತರಿಗಾಗಿ ರೈತ ಮಿತ್ರನಾಗಿ ಕೆಲಸ ಮಾಡಿದ ಮೋದಿ ಸರಕಾರ ರೈತರಿಗಾಗಿ ಕಿಸಾನ ಸಮ್ಮಾನ ಯೋಜನೆ ಮೂಲಕ ಆರು ಸಾವಿರ ರೂ. ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರ ನಿಲ್ಲಿಸಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕ್ಷೇತ್ರದ ಮೋರಟಗಿ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಧ್ಯವರ್ತಿಗಳ ಸಹಾಯ ವಿಲ್ಲದೆ ನೇರ ಖಾತೆಗೆ ಹಣ ಹಾಕುವ ಮೂಲಕ ರೈತ ಭಾಂದವರಿಗೆ ಸಹಕಾರ ನೀಡಿದ ಮೋದಿ ಸರ್ಕಾರ ಬಿಜೆಪಿ ಸಿದ್ದಾಂತ ಭ್ರಷ್ಟಾಚಾರ ತಡೆದು ಫಲಾಭವಿಗೆ ನೇರ ಮುಟ್ಟಿಸುವ ಕೆಲಸ ಪ್ರಾಮಾಣಿಕ ಕೆಲಸ ಮಾಡಿದೆ. ಆದರೆ ಕಾಂಗ್ರೇಸ್ ಸರಕಾರ ಭ್ರಷ್ಟಾಚಾರ ಹೆಮ್ಮರದಂತೆ ಬೆಳೆಸಿ ಸರಕಾರ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಫಲಾನುಭವಿಗೆ ಕೇವಲ ಹೈದನೈದು ಪೈಸೆ ಮುಟ್ಟುವಂತ ವ್ಯವಸ್ಥೆ ಸೃಷ್ಟಿಸಿದ್ದು ಕಾಂಗ್ರೇಸ ಪಕ್ಷದ ಸಾಧನೆ. ಬಿಜೆಪಿ ಒಂದೆ ಘೋಷವಾಕ್ಯ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಿ ಭವ್ಯ ಭಾರತ ನಿರ್ಮಾಣದ ಕನಸು ನನಸಾಗಿಸುವುದು. ಅಭಿವೃದ್ದಿ ಎಂದರೆ ಬಿಜೆಪಿ ಎಂದ ಅವರು ಈ ಬಾರಿ ಒದಗಿ ಬಂದಿರುವ ಸಿಂದಗಿ ವಿಧಾನ ಸಭೆ ಉಪ ಚುನಾವಣೆಯಲ್ಲಿ ಮುಗ್ದ ಮನಸ್ಸಿನ ಸರಳ ಸ್ವಭಾವದ ರಮೇಶ ಭೂಸನೂರ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ ಎರಡು ಬಾರಿ ಮತ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಸಿಂದಗಿ ಮತ ಕ್ಷೇತ್ರ ಅಭಿವೃದ್ದಿ ಪಡಿಸಿದ ರಮೇಶ ಭೂಸನೂರ ಅವರ  ಬಿಜೆಪಿ ಕಮಲದ ಗುರ್ತಿಗೆ ಮತಹಾಕುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬಸಲಿಂಗಪ್ಪ ಸಾಹು ಭೋನಾಳ, ಮಾಜಿ ತಾ.ಪಂ.ಸದಸ್ಯ ಮಡಿವಾಳಪ್ಪ ಭೋನಾಳ, ನಾಗೇಶ ಶಾಬಾದಿ, ನೂರಅಹ್ಮದ ಕಣ್ಣಿ, ಶ್ರೀಮಂತ ಮಳಗಿ, ಪ್ರಧಾನಿ ಮೂಲಿಮನಿ, ರವಿ ಹೋಳಿ, ಹಳ್ಳೇಪ್ಪ ಕೇಂಭಾವಿ, ಅಮ್ಮಣ್ಣ ವಾಲಿಕಾರ, ಶರಣಗೌಡ ಮಾಲಿಪಾಟೀಲ, ಭೂತಾಳಿ ಖಾನಾಪೂರ, ಶ್ರೀಶೈಲ ಕೆರಿಗೊಂಡ, ರಾಜು ಶಿರಶ್ಯಾಡ ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group